ತಾಲೂಕಿನ ಹಲವೆಡೆ ಅಕಾಲಿಕ ಮಳೆ: ಅಡಕೆ ಒದ್ದೆಯಾಗಿ ಬೆಳಗಾರರಿಗೆ ಸಮಸ್ಯೆ

 

 

 

 

ಬೆಳ್ತಂಗಡಿ: ತಾಲೂಕಿನ ಕೆಲವೊಂದು ಭಾಗದಲ್ಲಿ ಮಳೆಯಾಗಿದ್ದು ನಡ ಹಾಗೂ ಲಾಯಿಲ ಗ್ರಾಮದ ಕೆಲವೆಡೆ ಜೋರು ಮಳೆಯಾಗಿದೆ.
ಮಂಗಳವಾರ ಮೋಡ ಮುಸುಕಿದ ವಾತಾವರಣ ಇದ್ದು, ವಿಪರೀತ ಬಿಸಿಲ ಬೇಗೆಯೂ ಇತ್ತು. ಅದರೆ‌ ಸಂಜೆ ಅನಿರೀಕ್ಷಿತವಾಗಿ‌ ಮಳೆ ಸುರಿದಿದೆ. ಈ ಅಕಾಲಿಕ ಮಳೆಯಿಂದಾಗಿ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ಒದ್ದೆಯಾಗಿ ಸಮಸ್ಯೆ ಎದುರಾಗಿದ್ದು, ಒಣ ಅಡಕೆಯನ್ನು ರಕ್ಷಿಸಿಕೊಳ್ಳಲು ಪರದಾಡಬೇಕಾದ ಪ್ರಸಂಗವೂ ಎದುರಾಯಿತು.

error: Content is protected !!