ಡಿ 22 ರಂದು ರೋಟರಿ ಕ್ಲಬ್ ಬೆಳ್ತಂಗಡಿಗೆ ರೋಟರಿ ಗವರ್ನರ್ ಅಧಿಕೃತ ಭೇಟಿ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ

 

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ಗೆ ರೋಟರಿ ಜಿಲ್ಲೆ 3181 ರ ಗವರ್ನರ್ ಆಗಿರುವ ರೊ! ಪಿ. ಎಚ್.‌ಎಫ್. ಎ.ಆರ್. ರವೀಂದ್ರ ಭಟ್ ಅಧಿಕೃತ ಭೇಟಿ ಕಾರ್ಯಕ್ರಮವಿದ್ದು  ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಲಬ್ ನ ವಿವಿಧ ಸೇವಾ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ ಎಂದು ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆವೆಟ್ನಾಯ ತಿಳಿಸಿದರು ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ
ಸಮಾಜ ಸೇವಾ ಉದ್ದೇಶದಿಂದ ಸ್ಥಾಪಿತವಾದ ರೋಟರಿ ಸಂಸ್ಥೆಗೆ ಭಾರತದಲ್ಲಿ ಶತಮಾನದ ಇತಿಹಾಸ ಇದೆ . ಬೆಳ್ತಂಗಡಿಯ ರೋಟರಿ ಕ್ಲಬ್‌ಗೆ 51 ರ ಹರೆಯ ಜಾಗತಿಕವಾಗಿ ರೋಟರಿ ಸಂಘಟನೆ ಸುಮಾರು 200 ದೇಶಗಳಲ್ಲಿ 35,000 ಕ್ಕೂ ಮಿಕ್ಕಿ ಕ್ಲಬ್‌ಗಳನ್ನು ಹೊಂದಿದ್ದು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ . ಸಾರ್ಥಕ ಸೇವೆಯ 5 ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ಮಂಗಳೂರು ಉತ್ತರ ರೋಟರಿ ಕ್ಲಬ್‌ನ ಪ್ರಾಯೋಜಕತ್ವದಲ್ಲಿ 50 ವರ್ಷಗಳ ಹಿಂದೆ ತನ್ನ ಸೇವಾ ಕಾರ್ಯವನ್ನು   1971 ಡಿ 22 ರಲ್ಲಿ ಪ್ರಾರಂಭಿಸಿತು . ಪ್ರಸ್ತುತ ಶರತ್ ಕೃಷ್ಣ ಪಡ್ವಟ್ನಾಯ ಅಧ್ಯಕ್ಷರಾಗಿ , ಯು . ಎಚ್ . ಅಬೂಬಕ್ಕರ್ ಕಾರ್ಯದರ್ಶಿಯಾಗಿ , ವೈಕುಂಠ ಪ್ರಭು ಕೋಶಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ . ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಹಾಗೂ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲರಾದ ಪ್ರೋ ಎನ್ . ಜೆ ಕಡಂಬರವರು ಸ್ಥಾಪಕ ಅಧ್ಯಕ್ಷರಾಗಿ , ಸುಧೀರ್ ಜಿ . ಭಿಡೆಯವರು ಕಾರ್ಯದರ್ಶಿಯಾಗಿ ಸೇವೆಯನ್ನು ನೀಡಿರುತ್ತಾರೆ .
ಆ ನಂತರ ಬೆಳ್ತಂಗಡಿ ರೋಟರಿ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಕ್ಲಬ್ಬಿನ ಸಾರಥ್ಯವನ್ನು ವಹಸಿದ್ದ ಹಿರಿಯರು ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿರುತ್ತದೆ .

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ . ವೀರೇಂದ್ರ ಹೆಗ್ಗಡೆಯವರು ಗೌರವ ಸದಸ್ಯರಾಗಿರುವ ನಮ್ಮ ಈ ಸಂಸ್ಥೆಯು ಇಂದು ನಮ್ಮ ತಾಲೂಕಿನಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ 81 ಸಾಧಕರನ್ನು ಸದಸ್ಯರಾಗಿ ಇಂದು ಹೊಂದಿದೆ . ನಮ್ಮೊಂದಿಗೆ ರೋಟರಿ ಸಹಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು , 8 ಇಂಟರಾಕ್ಟ್ ಕ್ಲಬ್‌ಗಳು , 3 ರೋಟರಾಕ್ಸ್ ಕ್ಲಬ್‌ಗಳ ಹಾಗೂ ಆನ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ಸಹಭಾಗಗಳಾಗಿದ್ದಾರೆ . ಪ್ರಸ್ತುತ ನವೀನ ಜಯಕುಮಾರ್ ಶೆಟ್ಟಿ , ಅಧ್ಯಕ್ಷರಾಗಿ , ಭಾರತಿ ಗೋಪಾಲಕೃಷ್ಣ ಕಾರ್ಯದರ್ಶಿಗಳಾಗಿ ಆನ್ಸ್ ಕ್ಲಬ್‌ನಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ . 70ರ ದಶಕದಲ್ಲಿ‌ ಬೆಳ್ತಂಗಡಿಯ ಮುಖ್ಯರಸ್ತೆಯಲ್ಲಿರುವ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡು ಡಾ .ಡಿ . ವೀರೇಂದ್ರ ಹೆಗ್ಗಡೆಯವರಿಂದ 1974 ರ ಜುಲೈ 01 ರಂದು ಉದ್ಘಾಟನೆಗೊಂಡ ರೋಟರಿ ಶಿಶು ಸೌಧ ಕಳೆದ 5 ದಶಕಗಳಲ್ಲಿ ರೋಟರಿ ಸೇವಾ ಚಟುವಟಿಕೆಗಳ ಕೇಂದ್ರ ಬಿಂದು ಆಗಿತ್ತು . ಸಮಾಜದ ಮುಂದಿನ ಅಗತ್ಯಗಳಿಗೆ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಪಡೆದುಕೊಳ್ಳಬೇಕು ಹಾಗೂ ರೋಟರಿ ಕ್ಲಬ್ಬಿನ ಚಿನ್ನದ ಹಬ್ಬವನ್ನು ನೂತನ ಆಯಾಮಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ನಮ್ಮ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿದ್ದ ದಿ | ಕೆ . ರಮಾನಂದ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ರೋಟರಿ ಸೇವಾ ಟ್ರಸ್ಟ್ ಪ್ರಾರಂಭಗೊಂಡು ಪ್ರಸಕ್ತ ಅಧ್ಯಕ್ಷರಾಗಿ ಮೇಜರ್‌ ಜನರಲ್ ( ನಿವೃತ್ತ ) ಎಂ.ಎ.ಭಟ್ , ಕಾರ್ಯದರ್ಶಿಗಳಾಗಿ ರೋ । ಡಾ . ಶಶಿಧರ ಡೋಂಗ್ರೆ , ಕೋಶಾಧಿಕಾರಿಯಾಗಿ ರೋ ಶ್ರೀಕಾಂತ್ ಕಾಮತ್‌ರವರ ನೇತೃತ್ವದಲ್ಲಿ ರೋಟರಿ ಸೇವಾ ಟ್ರಸ್ಟ್ ಉಜಿರೆಯ ಕಾಶಿಬೆಟ್ಟುವಿನ ಅರಳಿ ರಸ್ತೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳಿಗೆ ಪೂರಕವಾದ 8500 ಚದರ ಅಡಿ ವಿಶಾಲವಾದ ಒಳಾಂಗಣ ಕ್ರೀಡಾಂಗಣ ಹಾಗೂ ಕೆ . ರಮಾನಂದ ಸಾಲ್ಯಾನ್ ಸ್ಮರಣಾರ್ಥ ಹವಾ ನಿಯಂತ್ರಣ ಸಭಾಂಗಣವನ್ನು ಹೊಂದಿರುವ ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ ಸಭಾ ಭವನವನ್ನು ರೋಟರಿ ಸದಸ್ಯರ , ದಾನಿಗಳ ಸಹಕಾರದೊಂದಿಗೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುತ್ತದೆ .

 

 

 

ಡಿ  22 ರಂದು ನಮ್ಮ ಸುವರ್ಣ ಮಹೋತ್ಸವವು ಅಧಿಕೃತವಾಗಿ ಸಮಾರೋಪಗೊಳ್ಳುತ್ತಿದೆ . ಅದೇ ದಿನ  ವಿವಿಧ ಸೇವಾ ಯೋಜನೆಗಳಿಗೆ  ಗವರ್ನರ್  ಚಾಲನೆಯನ್ನು ನೀಡಲಿದ್ದಾರೆ
ರೋಟರಿ ಸೇವಾ ಭವನ ಕಾಶಿಬೆಟ್ಟು ಇಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಸಂಜೆ 7-00 ಗಂಟೆಗೆ ಆಯೋಜಿಸಲಾಗಿದೆ . ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ನಮ್ಮ ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯರ , ಆರ್.ಸಿ.ಸಿ. ಇಂಟರಾಕ್ಟ್ ಹಾಗೂ ಆನ್ಸ್ ಕ್ಲಬ್‌ನ ಸಂಪೂರ್ಣ ಸಹಕಾರದೊಂದಿಗೆ ಹಾಗೂ ರೋಟರಿ ಗವರ್ನರ್ ರೋ l ಎ . ಆರ್ . ರವೀಂದ್ರ ಭಟ್‌ರವರು ಅಸಿಸ್ಟಂಟ್ ಗವರ್ನರ್, ರೋ , ಸುರೇಂದ್ರ ಕಿಣಿ ಹಾಗೂ ವಲಯ ಕಾರ್ಯದರ್ಶಿ ರೋ ಜಯರಾಮ ರೈ ಇವರ ಮಾರ್ಗದರ್ಶನದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ಮಧ್ಯೆಯು Serve to Change lives ಎಂಬ ಧೈಯ ವಾಕ್ಯದಡಿ ಜುಲೈ 2021 ರಿಂದ ಮೊದಲುಗೊಂಡು ಈವರೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಜನ ಸಾಮಾನ್ಯರಿಗೆ ಉಪಯುಕ್ತವಾದ ಸುಮಾರು 500 ಕ್ಕಿಂತಲೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಿ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನವನ್ನು ಈವರೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರು ಪತ್ರಿಕಾಗೋಷ್ಠಿಯಲ್ಲಿ ರೋಟರಿ‌ ಝೋನಲ್ ಲೆಫ್ಟಿನೆಂಟ್ ಧನಂಜಯ ರಾವ್ ಬಿ. ಕೆ., ಕಾರ್ಯದರ್ಶಿ ಅಬೂಬಕ್ಕರ್ ಉಜಿರೆ, ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್, ನಿಯೋಜಿತ ಕಾರ್ಯದರ್ಶಿ ರಕ್ಷಾ ರಾಗ್ನೇಶ್ ಉಪಸ್ಥಿತರಿದ್ದರು.

 

error: Content is protected !!