ಸರಕಾರಿ ಜಮೀನು ಸ್ವಾಧೀನ‌ ನಡೆಸಿದ್ದ ಬೆಳ್ತಂಗಡಿ ತಹಶೀಲ್ದಾರ್ ವರ್ಗಾ: ಮಹೇಶ್ ಅವರನ್ನು ಚಾಮರಾಜನಗರಕ್ಕೆ ವರ್ಗಾಯಿಸಿ ಆದೇಶ

 

 

 

 

ಬೆಳ್ತಂಗಡಿ: ಕಂದಾಯ ಇಲಾಖೆಯ ಒಂಬತ್ತು ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಅದೇಶ ಮಾಡಿದೆ ಅದರಲ್ಲಿ
ಒಂದುವರೆ ವರ್ಷದ ಹಿಂದೆ ಚಾಮರಾಜನಗರ ನಗರದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಅಗಿ ನೇಮಕಗೊಂಡಿದ್ದ ಗ್ರೇಡ್-1 ತಹಶೀಲ್ದಾರ್ ಮಹೇಶ್.ಜೆ ಇಂದು ಮತ್ತೆ ಚಾಮರಾಜನಗರ ನಗರ ತಾಲೂಕು ತಹಶೀಲ್ದಾರ್ ಅಗಿ ವರ್ಗಾವಣೆ ಅದೇಶ ಅಗಿದೆ.
ಇನ್ನು ತೆರವಾಗಿರುವ ಬೆಳ್ತಂಗಡಿ ತಹಶೀಲ್ದಾರ್ ಸ್ಥಾನಕ್ಕೆ ಯಾರನ್ನು ಸರಕಾರ ನೇಮಕ ಮಾಡಿಲ್ಲ. ಮಹೇಶ್ ಅವರು ಜಾಗ ಪರಬಾರೆ ಬಗ್ಗೆ  ಸುದ್ದಿಯಲ್ಲಿದ್ದು, ಇದೇ ವೇಳೆ ವರ್ಗಾವಣೆಗೊಂಡಿರುವುದು ಅಚ್ಚರಿ ‌ಮೂಡಿಸಿದೆ. ತಾಲೂಕಿನಲ್ಲಿ ಸರಳ ಹಾಗೂ ಪ್ರಮಾಣಿಕ ಕಾರ್ಯದ ಮೂಲಕ ಗಮನ ಸೆಳೆದಿದ್ದ ಗಣಪತಿ ಅವರೂ ವರ್ಗಾವಣೆಗೊಂಡು ಅಚ್ಚರಿ ಮೂಡಿಸಿದ್ದರು.

error: Content is protected !!