ಸ್ವಾತಂತ್ರ್ಯ ಹೋರಾಟಗಾರ ದಿ. ಬೋಜರಾಜ ಹೆಗ್ಡೆ ಕುಟುಂಬದ ಮನೆಗೆ ಸಿಡಿಲಿನಿಂದ ಹಾನಿ ಸಿಡಿಲಿನ ತೀವ್ರತೆಗೆ ಬಾವಿಯ ಅವರಣ ಗೋಡೆಗೂ ಹಾನಿ

 

 

 

 

 

ಬೆಳ್ತಂಗಡಿ: ನ 09 ರಂದು ನಿಧನ ಹೊಂದಿದ ಹಿರಿಯ   ಸ್ವಾತಂತ್ರ್ಯ ಹೋರಾಟಗಾರ ದಿ. ಭೋಜರಾಜ ಹೆಗ್ಡೆಯವರ ಕುಟುಂಬದ ಮೂಲ ಮನೆಗೆ ಸಿಡಿಲಿನಿಂದ ಹಾನಿಯಾದ ಘಟನೆ ನ 13 ಸಂಜೆ ನಡೆದಿದೆ.

 

 

ಆರಂಬೋಡಿ ಗ್ರಾಮದ ಪಿಲ್ಲಂಬು ಮನೆಯ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಯ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಅದಲ್ಲದೆ ಮನೆಗೂ ಭಾಗಶಃ ಹಾನಿಯಾಗಿದೆ.

 

 

 

 

ಸಿಡಿಲಿನ ತೀವ್ರತೆಗೆ ಮನೆ ಸಮೀಪದ ಬಾವಿಯ ಅವರಣ ಗೋಡೆಗೂ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದ್ದರಿಂದ ಯಾರಿಗೂ ಅಪಾಯವಾಗಿಲ್ಲ.

 

 

 

 

 

error: Content is protected !!