ತುಲುವೆರೆ ಪಕ್ಷ: ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ಎಂ. ಕಾರ್ಯದರ್ಶಿಯಾಗಿ ಸತೀಶ್ ಪೂಜಾರಿ ಆಯ್ಕೆ.

 

 

 

ಪ್ರಶಾಂತ್ ಎಂ

 

 

 

     ಸತೀಶ್ ಪೂಜಾರಿ ಎನ್

 

ಬೆಳ್ತಂಗಡಿ : ತುಲುವೆರೆ ಪಕ್ಷದ ಬೆಳ್ತಂಗಡಿ ತಾಲೂಕು ಕಾರ್ಯಕರ್ತರ ಸಭೆಯು ಇತ್ತೀಚೆಗೆ ಅಂಬೇಡ್ಕರ್ ಭವನದಲ್ಲಿ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ. ಅಧ್ಯಕ್ಷತೆಯಲ್ಲಿ ನಡೆಯಿತು. ತುಳು ಭಾಷೆಗೆ ಸ್ಥಾನಮಾನ, ತುಳುನಾಡಿನ ಸಮಗ್ರ ಅಭಿವೃದ್ದಿ ಮತ್ತು ತುಳುನಾಡ್ ರಾಜ್ಯ ರಚನೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿರ್ಣಯದೊಂದಿಗೆ ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ಪ್ರಶಾಂತ್. ಎಂ, ಉಪಾಧ್ಯಕ್ಷರಾಗಿ ಮುಖಿಂ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸತೀಶ್ ಪೂಜಾರಿ .ಎನ್ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆರ್. ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೋಪಾಲ್ ಸಂಜಯನಗರ, ಸುರೇಂದ್ರ ಬಂಗಾಡಿ, ಧನಂಜಯ ಕುಮಾರ್ ಡಿ., ಉಮೇಶ್ ಕುಲಾಲ್, ಮಹಮ್ಮದ್ ಶರೀಫ್, ಮನೋಹರ್ ಕುಮಾರ್, ಗಿರೀಶ್ ನಿಸರ್ಗ ಆಯ್ಕೆಯಾದರು.

ತುಲುವೆರೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ನವೀನ್ ಪೂಜಾರಿ, ರೇಖಾ ಲೋಬೋ, ರಾಜೇಶ್ ಕುಲಾಲ್, ಪ್ರವೀಣ್ ಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!