ಇನ್ನೂ ಪತ್ತೆಯಾಗದ ಸುಲ್ಕೇರಿಯ ಕಂದಮ್ಮನ ಸುಳಿವು: ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್., ಸ್ಥಳೀಯರಿಂದ ಹುಡುಕಾಟ: ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ:

ಬೆಳ್ತಂಗಡಿ: ಸುಲ್ಕೇರಿಯ ಜಂತಿಗೋಳಿ ಬಳಿಯ ಪರಾರಿ ಎಂಬಲ್ಲಿನ ಸುಭಾಶ್-ಸುಚಿತ್ರಾ ಎಂಬುವರ ಎರಡೂವರೇ ವರುಷದ ಮಗು  ದೃತ್ವಿ  ಇವತ್ತು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಕಾಣೆಯಾಗಿದ್ದು  ಕಂದಮ್ಮನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಎನ್. ಡಿ. ಆರ್. ಎಫ್. ಸದಸ್ಯರು, ಹಾಗೂ ಸ್ಥಳೀಯರು ಮನೆ ಸಮೀಪದ ನದಿಯಲ್ಲಿ ಹಾಗೂ ತೋಟದ ಸುತ್ತಮುತ್ತ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿಲ್ಲ.

ರಾತ್ರಿ ಕಾರ್ಯಾಚರಣೆಗೆ ತೊಡಕಾಗಿದ್ದು ನಾಳೆ ಬೆಳಗ್ಗೆಯಿಂದ ಹುಡುಕಾಟ ನಡೆಯಲಿದೆ ಎಂದು ತಿಳಿದು ಬಂದಿದೆ.

error: Content is protected !!