ಚಂದ್ಕೂರು ಅನಾರೋಗ್ಯದಿಂದ ಯುವಕ ಸಾವು

ಬೆಳ್ತಂಗಡಿ: ಲಾಯಿಲ ಗ್ರಾಮದ ಚಂದ್ಕೂರು ಸಮೀಪದ ಯುವಕನೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.ಲಾಯಿಲ ಗ್ರಾಮದ ಚಂದ್ಕೂರು ಸಮೀಪದ ಬರೆಂಗಾಡಿ ಎಂಬಲ್ಲಿಯ ಸದಾನಂದ (30) ಎಂಬ ಯುವಕನು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದು ಇಂದು ಜೂ 02 ಮದ್ಯಾಹ್ನ ಮನೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಚಂದ್ಕೂರು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಲಂಕಾರ ಸಮಿತಿಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ ಇವರು ಅಣ್ಣು ಮಲೆಕುಡಿಯ ಎಂಬವರ ಪುತ್ರನಾಗಿದ್ದಾರೆ.

error: Content is protected !!