ಆರೋಗ್ಯ ಸೇವೆಗಾಗಿ ಬೆಳ್ತಂಗಡಿಗೆ 50 ಬೆಡ್ ಹಸ್ತಾಂತರ: ಕೆ.ಐ.ಓ.ಸಿ.ಎಲ್ ಲಿಮಿಟೆಡ್ ನ ಸಿ.ಎಸ್.ಆರ್. ₹ 8ಲಕ್ಷ ಅನುದಾನದಲ್ಲಿ ವ್ಯವಸ್ಥೆ: ಸಂಸದ ನಳಿನ್ ಕುಮಾರ್ ‌ಸಹಕಾರ

ಬೆಳ್ತಂಗಡಿ: ತಾಲೂಕಿನ ಆರೋಗ್ಯ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಿಂದ ಭಾರತ ಸರಕಾರದ ಉದ್ಯಮ ಸಂಸ್ಥೆಯಾದ ಕೆ.ಐ.ಓ.ಸಿ.ಎಲ್ ಲಿಮಿಟೆಡ್ ಇದರ ಸಿ.ಎಸ್.ಆರ್ ಅನುದಾನದಿಂದ ಸುಮಾರು 8 ಲಕ್ಷ ವೆಚ್ಚದ 50 ಬೆಡ್ ಗಳ ವಿತರಣೆ ಕಾರ್ಯಕ್ರಮ ಮೇ.29ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದ ಪಿನಾಕಿ ಸಭಾ ಭವನದಲ್ಲಿ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ ಹಾಗೂ ಕೆ.ಐ..ಓ.ಸಿ.ಎಲ್ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಎಂ. ವಿ. ಸುಬ್ಬರಾವ್ ಅವರು ಕೆ.ಐ.ಓ.ಸಿ.ಎಲ್ ಲಿಮಿಟೆಡ್ ವತಿಯಿಂದ ನೀಡಲಾದ 50 ಬೆಡ್ ಗಳನ್ನು ಆಸ್ಪತ್ರೆಯ ಆಡಳಿಯ ವರ್ಗಕ್ಕೆ ಹಸ್ತಾಂತರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್, ಕೆ.ಐ..ಓ.ಸಿ.ಎಲ್ ಸಂಸ್ಥೆಯ ವಿಭಾಗೀಯ ಪ್ರಬಂಧಕ ರಾಮಕೃಷ್ಣ ರಾವ್, ಸೀನಿಯರ್ ಎಚ್.ಆರ್. ಮೆನೇಜರ್ ಮುರುಗೇಶ್, ಎಚ್.ಆರ್. ಮೆನೇಜರ್ ರೊನಾಲ್ಡ್ ಪಾಯಸ್, ತಹಸೀಲ್ದಾರ್ ಮಹೇಶ್ ಜೆ., ತಾಲೂಕು ವೈದಾಧಿಕಾರಿ ಡಾ. ಕಲಾಮಧು , ತಾಲೂಕು ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಆಸ್ಪತ್ರೆ ಸಿಬ್ಬಂದಿ ಹಾಗೂ ಕೆ.ಐ..ಓ.ಸಿ.ಎಲ್. ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!