ಬದುಕು ಕಟ್ಟೋಣ ತಂಡದಿಂದ ಕಲ್ಮಂಜ ಗ್ರಾಮ ವ್ಯಾಪ್ತಿಗೆ ತುರ್ತು ವಾಹನ ಹಸ್ತಾಂತರ

ಉಜಿರೆ: ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭ ತುರ್ತು ಸಹಾಯಕ್ಕೆ ಉಜಿರೆಯ ಬದುಕು ಕಟ್ಟೋಣ ಬನ್ನಿ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಆಪ್ತರಕ್ಷಕ ವಾಹನವನ್ನು ಮೇ17ರಂದು ಗ್ರಾಮ ಪಂಚಾಯಿತಿಯಲ್ಲಿ ಹಸ್ತಾಂತರಿಸಲಾಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಮೋಹನ ಕುಮಾರ್, ರಾಜೇಶ್ ಪೈ ರೋಟರಿ ಕ್ಲಬ್ ಅಧ್ಯಕ್ಷ ಬಿಕೆ ಧನಂಜಯ ರಾವ್ ಕಾರ್ಯದರ್ಶಿ ಶ್ರೀಧರ ಕೆ.ವಿ. ಗ್ರಾಪಂ ಅಧ್ಯಕ್ಷ ಶ್ರೀಧರ ಕಲ್ಮಂಜ, ಪಿಡಿಒ ಇಮ್ತಿಯಾಜ್, ತಾಪಂ ಸದಸ್ಯ ಶಶಿಧರ ಕಲ್ಮಂಜ, ಉದ್ಯಮಿ ರವಿ ಚಕ್ಕಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಲಾಯಿತು. ಆರೋಗ್ಯ ಸಹಾಯಕಿಯರನ್ನು ಅಭಿನಂದಿಸಲಾಯಿತು.

error: Content is protected !!