ಮುಂಡಾಜೆ ಪಿಕಪ್ ಬೈಕ್ ಡಿಕ್ಕಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಸವಾರನೂ ಮೃತ್ಯು

ಬೆಳ್ತಂಗಡಿ: ಪಿಕಪ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಬೈಕಿನಲ್ಲಿದ್ದ ಇನ್ನೋರ್ವ ಸವಾರನೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನಲ್ಲಿ ಮೃತ ಪಟ್ಟ ಘಟನೆ ನಡೆದಿದೆ.

ಮುಂಡಾಜೆ ಗ್ರಾಮದ ಸೀಟ್ ಕಾಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಉಜಿರೆಯಿಂದ ಮಂಡಾಜೆ ಕಡೆಗೆ ಹೋಗುತಿದ್ದ ಪಿಕಪ್ ಬೈಕಿಗೆ ಹೊಡೆದಿದ್ದು ಬೈಕ್ ಸವಾರ  ತೋಟತ್ತಾಡಿ ಸಮೀಪದ ಕುತ್ರಿಜಾಲ್ ನಿವಾಸಿ ಸುದೀಪ್ ಭಂಡಾರಿ ( 30) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.  ಉಜಿರೆ ಪೆರ್ಲ ನಿವಾಸಿ ಪ್ರಶಾಂತ್ ಗಂಭೀರ ಗಾಯಗೊಂಡಿದ್ದು ಇವರನ್ನು ತಕ್ಷಣ ಉಜಿರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡುಹೋಗಲಾಗಿತ್ತು ಅದರೆ ಅವರೂ ಕೂಡ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!