ಲಾಯಿಲ ಅಗ್ನಿ ಅನಾಹುತ: ಬೆಂಕಿ ನಂದಿಸಿದ ಅಗ್ನಿ ಶಾಮಕ ಇಲಾಖೆ: ತುರ್ತು ಸ್ಪಂದಿಸಿದ ಲಾಯಿಲಾ ಗ್ರಾ.ಪಂ.

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜಿರೆ ಬೆಳ್ತಂಗಡಿ ಹೆದ್ದಾರಿಯ ಕಕ್ಕೇನ ಕ್ರಾಸ್ ಬಳಿ ಟ್ರಾನ್ಸ್ ಫಾರ್ಮರ್ ಬಳಿ ಅಗ್ನಿ ಅನಾಹುತ ಸಂಭವಿಸಿದ್ದು, ಸಕಾಲಿಕ ಕ್ರಮದಿಂದ ದೊಡ್ಡ ಮಟ್ಟದ ಹಾನಿ‌ ತಪ್ಪಿದೆ.

ಘಟನೆಯ ಮಾಹಿತಿ ದೊರೆತ ಕೂಡಲೆ‌ ಲಾಯಿಲಾ ಗ್ರಾ.ಪಂ.ನಿಂದ ಸ್ಥಳಕ್ಕೆ ಆಗಮಿಸಿ‌ ಸ್ಥಳೀಯರ ಸಹಕಾರದಿಂದ ಹೆಚ್ಚಿನ‌ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೆಳ್ತಂಗಡಿ ‌ಅಗ್ನಿಶಾಮಕ ದಳದ ಸಿಬ್ಬಂದಿಗಳು ‌ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಪರಿಸ್ಥಿತಿ ನಿಯಂತ್ರಿಸಲಾಗಿದೆ.

error: Content is protected !!