ಇಂದು‌ ಸಂಜೆ ಬೆಳ್ತಂಗಡಿ ನವಶಕ್ತಿ ಫ್ರೆಂಡ್ಸ್ ನಿಂದ ಸಾಂಸ್ಕೃತಿಕ ಕಲಾ ವೈಭವ,‌ ವೀರ ಯೋಧರಿಗೆ ಗೌರವರ್ಪಣೆ, ಮುಖ್ಯ ಮಂತ್ರಿ ಪದಕ ಪುರಸ್ಕ್ರತರಿಗೆ ಸನ್ಮಾನ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಜಾತ್ರಾ ಮಹಾರಥೋತ್ಸವ

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೆಯ ಮಹಾ ರಥೋತ್ಸವ ಪ್ರಯುಕ್ತ ಫೆ. 19 ಶುಕ್ರವಾರ ಸಂಜೆ ನವಶಕ್ತಿ ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ವೀರ ಯೋಧರಿಗೆ ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಬೆಳ್ತಂಗಡಿ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ರಾಮನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ನಡೆಯಲಿದೆ.

ಸಂಜೆ ಪ್ರಖರ ವಾಗ್ಮಿ ಆದರ್ಶ ಗೋಖಲೆಯವರಿಂದ ಉಪನ್ಯಾಸ, ರಾತ್ರಿ 8 ರಿಂದ ಪ್ರಕಾಶ್ ಮಹಾದೇವನ್ ಇವರ ಅಟ್ರಾಕ್ಟಿವ್ ಮೆಲೋಡಿಸ್ ಮಂಗಳೂರು ಇವರಿಂದ ಸಾಂಸ್ಕ್ರತಿಕ ಕಲಾ ವೈಭವ ನಡೆಯಲಿದೆ. ಗುರು ರಾಘವೇಂದ್ರ ಭಜನಾ ತಂಡ ಗುರಿಪಳ್ಳ ಇವರಿಂದ ಕುಣಿತ ಭಜನೆ, ಧರ್ಮ ಶಾಸ್ತ ಚೆಂಡೆ ಬಳಗದಿಂದ ಆಕರ್ಷಕ ಚೆಂಡೆ ಬಡಿತ ಕಾರ್ಯಕ್ರಮ ನಡೆಯಲಿದೆ. ಬಳಿಕ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಜಾತ್ರೆ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ.

error: Content is protected !!