ಸನತ್ ಶೆಟ್ಟಿ ಮನೆಗೆ‌ ಜಿಲ್ಲಾಧಿಕಾರಿ ಭೇಟಿ, ಪೋಷಕರಿಗೆ ಸಾಂತ್ವನ: ಎಳನೀರು, ಬಂಗರ ಪಲ್ಕೆ ಫಾಲ್ಸ್ ಬಳಿ ದುರಂತ ನಡೆದ ಸ್ಥಳಕ್ಕೂ ಭೇಟಿ

 

ಬೆಳ್ತಂಗಡಿ: ಎಳನೀರು, ಬಂಗರ ಪಲ್ಕೆ ಫಾಲ್ಸ್ ಬಳಿ ನಡೆದ ದುರಂತ ಪ್ರಕರಣದಲ್ಲಿ ನಾಪತ್ತೆಯಾದ ಸನತ್ ಶೆಟ್ಟಿ ಮನೆಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಭೇಟಿ ನೀಡಿ ಸನತ್ ಶೆಟ್ಟಿ ಪೋಷಕರಿಗೆ ಸಾಂತ್ವನದ ನುಡಿಗಳನ್ನು ಹೇಳಿದರು.

ಪೋಷಕರ ಬಳಿ ಮಾತನಾಡಿ, ಸನತ್ ದೇಹ ಪತ್ತೆಗೆ ಶಕ್ತಿ ಮೀರಿ‌ ಪ್ರಯತ್ನಗಳು ನಡೆಯುತ್ತಿವೆ. ಸರಕಾರಿ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಮುಂದೆ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಅದಕ್ಕೂ ಅವಕಾಶ ಕಲ್ಪಿಸಲು ಸಿದ್ಧ. ಪೋಷಕರಾದ ತಾವು ಧೈರ್ಯದಿಂದ ಇರಬೇಕು. ಸ್ಥಳಕ್ಕೆ ಭೇಟಿ ನೀಡಿ‌ ಮಾಡಬಹುದಾದ ಕಾರ್ಯಾಚರಣೆಗಳ ಕುರಿತು ‌ಚಿಂತಿಸಲಾಗುವುದು ಎಂದು ತಿಳಿಸಿದರು.

ಸನತ್ ಶೆಟ್ಟಿ ನಿವಾಸದಿಂದ ನೇರವಾಗಿ‌ ದುರಂತ ನಡೆದ ಎಳನೀರು, ಬಂಗರ ಪಲ್ಕೆ ಫಾಲ್ಸ್ ಸ್ಥಳಕ್ಕೆ ತೆರಳಿದರು. ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜಾ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಮೊದಲಾದವರು ಹಾಜರಿದ್ದರು. ‌

error: Content is protected !!