ಮುಂಡಾಜೆ: ಅಂಚೆ ಕಚೇರಿ ನೌಕರ ಕೃಷ್ಣಪ್ಪರಿಗೆ ಬೀಳ್ಕೊಡುಗೆ: 42 ವರ್ಷಗಳ ಸುದೀರ್ಘ ಸೇವೆ

 

ಬೆಳ್ತಂಗಡಿ: ಮುಂಡಾಜೆ ಅಂಚೆ ಕಚೇರಿಯಲ್ಲಿ ಗ್ರಾಮೀಣ ಡಾಕ್ ಸೇವಾ ಮೈಲ್ ಡೆಲಿವರರ್(ಜಿಡಿಎಸ್‌ಎಂಡಿ) ಆಗಿ 42 ವರ್ಷಗಳ ಕಾಲ ಸುದೀರ್ಘ ಕರ್ತವ್ಯ ಸಲ್ಲಿಸಿ ಡಿ. 24 ರಂದು ನಿವೃತರಾದ ಹೆಚ್. ಕೃಷ್ಣಪ್ಪ ಪೂಜಾರಿ ಅವರಿಗೆ ಮುಂಡಾಜೆ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಶಾಖೆಗಳಲ್ಲಿ ಸಹೋದ್ಯೋಗಿಗಳಾಗಿದ್ದವರ ವತಿಯಿಂದ ಬೀಳ್ಕೊಡುಗೆ ಜರುಗಿತು.

ಕೃಷ್ಣಪ್ಪ ಪೂಜಾರಿ ಮತ್ತು ಮಾಲತಿ ದಂಪತಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಅಂಚೆ ಇಲಾಖೆ ಇನ್ಸ್‌ಪೆಕ್ಟರ್ ಆಫ್ ಪೋಸ್ಟ್ ಸುಜಯ್ ಸಿ., ಮೈಲ್ ಓವರ್‌ ಸೀಯರ್ ಧನಂಜಯ, ಜಮ್ಮುವಿನಲ್ಲಿ ಸೇನಾ ನೆಲೆಯಲ್ಲಿ ಅಂಚೆ ಇಲಾಖೆ ಗುಮಾಸ್ತರಾಗಿರುವ ತಿಮ್ಮಪ್ಪ, ಮುಂಡಾಜೆ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಧನಂಜಯ, ಪೋಸ್ಟಲ್ ಅಸಿಸ್ಟೆಂಟ್ ಶೈಲಶ್ರೀ, ಕಕ್ಕಿಂಜೆ ಶಾಖೆಯ ಸಂತೋಷ್ ಮತ್ತು ಶೋಭಾ, ಗಂಡಿಬಾಗಿಲು ಶಾಖೆಯ ಸುರೇಶ್, ಚಾರ್ಮಾಡಿ ಶಾಖೆಯ ಸುಶೀಲಾ, ಕಲ್ಮಂಜ ಶಾಖೆಯ ಪ್ರಕಾಶ್, ನೆರಿಯ ಶಾಖೆಯ ಎಲ್ಯಣ್ಣ ಗೌಡ, ಕಡಿರುದ್ಯಾವರ ಶಾಖೆಯ ಚೆನ್ನಕೇಶವ ಪ್ರಭು ಮತ್ತು ಉಮೇಶ್, ಉಜಿರೆ ಎಸ್‌ಡಿಎಂ ಶಾಖೆಯ ಪೋಸ್ಟ್‌ಮಾಸ್ಟರ್ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

error: Content is protected !!