ಉಜಿರೆ ರಸ್ತೆ ದಾಟುವ ಸಂದರ್ಭ ಅಪಘಾತ ಪ್ರಕರಣ: ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಬೆಳ್ತಂಗಡಿ: ರಸ್ತೆ ದಾಟುತ್ತಿದ್ದ ಸಂದರ್ಭ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಉಜಿರೆ ಬಳಿ‌ ನಡೆದಿದೆ.ಸೋಮವಾರ ರಾತ್ರಿ ಸುಮಾರು 9.30ರ ಸುಮಾರಿಗೆ ನಿಡಿಗಲ್ ನಿವಾಸಿ ಶಿವಶಂಕರ ಕಾಮತ್ ಅವರು ಉಜಿರೆಯ ಶ್ರೀರಾಮ್ ಸರ್ವಿಸ್ ಸ್ಟೇಷನ್ ಬಳಿ ತಮ್ಮ ಕಾರು ನಿಲ್ಲಿಸಿ ರಸ್ತೆ ದಾಟುತ್ತಿದ್ದರು‌. ಈ ಸಂದರ್ಭದಲ್ಲಿ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಶಿವಶಂಕರ್ ಅವರು ರಸ್ತೆಗೆ ಬಿದ್ದರು. ದ್ವಿಚಕ್ರ ಸವಾರ ಅಬ್ದುಲ್ ರಜಾಕ್ ಅವರೂ ರಸ್ತೆಗೆ ಬಿದ್ದರು.‌ ಶಿವ ಶಂಕರ ಕಾಮತ್ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು. ಗಾಯ ದ್ವಿಚಕ್ರ ಸವಾರ ಅಬ್ದುಲ್ ರಜಾಕ್ ಅವರೂ ಗಾಯಗೊಂಡರು. ಇಬ್ಬರನ್ನೂ ‌ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಶಿವಶಂಕರ ಕಾಮತ್(53) ಅವರು ಚಿಕಿತ್ಸೆ ‌ಫಲಕಾರಿಯಾಗದೆ‌ ಡಿ.22 ಮಂಗಳವಾರ ಮಧ್ಯಾಹ್ನ 12.20ರ ಸುಮಾರಿಗೆ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಸಂಚಾರಿ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!