ರಾಜಕೇಸರಿ 33ನೇ ಆಸರೆ ಮನೆಗೆ ಶಿಲಾನ್ಯಾಸ- ಶ್ರಮದಾನ: ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಕೊಡುಗೆ

ಉಜಿರೆ: ಇಚ್ಚಿಲ ಎಂಬಲ್ಲಿ ಮೂರು ಹೆಣ್ಣು ಮಕ್ಕಳು ಮಾತ್ರ ಇರುವ ಅರ್ಹ ಕುಟುಂಬವೊಂದಕ್ಕೆ ರಾಜಕೇಸರಿ ಸಂಘಟನೆ ನೇತೃತ್ವದಲ್ಲಿ ಆಸರೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಅಡಿಪಾಯದ ಕಾಮಗಾರಿಗೆ ಶಿಲಾನ್ಯಾಸ ಡಿ.20 ರಂದು ನಡೆಯಿತು.

ಪುರೋಹಿತ ಹಾಗೂ ಜ್ಯೋತಿಷಿ ಮನೋಹರ ತೋಡ್ತಿಲ್ಲಾಯ ಭೂಮಿ ಪೂಜೆ ನೆರವೇರಿಸಿದರು.

ಮುಂಡಾಜೆಯ ಕುಶಲಾವತಿ ಎಂಬವರು ವಿಧವೆಯಾಗಿದ್ದು, ಮೂರು ಮಂದಿ ಹೆಣ್ಣು ಮಕ್ಕಳನ್ನು ಹೊಂದಿದ್ದು, ಪ್ರಸ್ತುತ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಸಂಕಷ್ಟ ದಿಂದ ಬದುಕು ಸಾಗಿಸುತ್ತಿದ್ದು, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನ್ನವರ್ ಆಶ್ರಯದಲ್ಲಿ ಈ ಮನೆ ನಿರ್ಮಾಣವಾಗಲಿದೆ.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಜಿರೆಯ ಯುವ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಪಣಿಯಲು, ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ., ತಾ. ಅಧ್ಯಕ್ಷ ಕಾರ್ತಿಕ್, ತಾ. ಸಂಚಾಲಕ ಪ್ರವೀಣ್ ಕುಲಾಲ್, ತಾಲೂಕು ಮಾನವ ಸ್ಪಂದನ ತಂಡದ ಮುಖ್ಯಸ್ಥ ಪಿ.ಸಿ. ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಮುಖ್ಯಸ್ಥ, ಪತ್ರಕರ್ತ ಅಶ್ರಫ್ ಆಲಿಕುಂಞಿ, ರಾಜಕೇಸರಿ ಕಾರ್ಯಕರ್ತರಾದ ಉಮೇಶ್, ಸಂತೋಷ್, ನಿತಿನ್, ಪ್ರವೀಣ್, ಸಂದೇಶ್, ರಾಜೇಶ್, ಗಣೇಶ್, ಲೋಕೇಶ್, ಸ್ಥಳೀಯ ಹಿರಿಯರಾದ ವೇದಾವತಿ, ಕಮಲಾ, ವೀಣಾ, ಉಷಾ, ವಿನೋದಾ ಉಪಸ್ಥಿತರಿದ್ದರು.

ಸಂತ್ರಸ್ತ ಕುಟುಂಬದ ಕುಶಲಾವತಿ, ಅವರ ಮೂವರು ಮಕ್ಕಳಾದ ಶೃತಿ ಶೆಟ್ಟಿ, ಸುಮಾ ಮತ್ತು ಸುಶ್ಮಿತಾ ಉಪಸ್ಥಿತರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !!