ಬೆಳ್ತಂಗಡಿಗೆ ರಿಷಿ ಕುಮಾರ ಸ್ವಾಮೀಜಿ: ಕಲ್ಮಂಜ ವೀರಕೇಸರಿ ಮನೆ ನಿರ್ಮಾಣ ಸ್ಥಳ ವೀಕ್ಷಣೆ: ಕನ್ಯಾಡಿ ಸ್ವಾಮೀಜಿಗಳಿಂದ ಗೌರವಾರ್ಪಣೆ

ಉಜಿರೆ: ಕಾಳಿಕಾ ಮಠದ ರಿಷಿ ಕುಮಾರ ಸ್ವಾಮೀಜಿ ಅವರು ಬೆಳ್ತಂಗಡಿಗೆ ಭೇಟಿ ನೀಡಿದ್ದು, ಕಲ್ಮಂಜ ಹಾಗೂ ಕನ್ಯಾಡಿ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿದರು.

ಕನ್ಯಾಡಿ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಸಂಸ್ಥಾನಮ್ ಗೆ ಭೇಟಿ ನೀಡಿ ಶ್ರೀ ರಾಮ ದೇವರ ದರ್ಶನ ಪಡೆದು, ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಶ್ರೀ ರಾಮ ಕ್ಷೇತ್ರದ ಪರವಾಗಿ ಸ್ವಾಮೀಜಿ, ರಿಷಿ ಕುಮಾರ ಸ್ವಾಮೀಜಿಯನ್ನು ಗೌರವಿಸಿದರು.

ರಿಷಿ ಕುಮಾರ ಸ್ವಾಮೀಜಿ ಅವರು ಕಲ್ಮಂಜದಲ್ಲಿ ವೀರಕೇಸರಿ ಕಲ್ಮಂಜದಿಂದ ನಿರ್ಮಾಣಗೊಳ್ಳುತ್ತಿರುವ ಮನೆ ವೀಕ್ಷಣೆ ನಡೆಸಿ, ತಮ್ಮಿಂದಾಗುವ ಸಹಾಯ ಮಾಡುವುದಾಗಿ ತಿಳಿಸಿ, ವೀರಕೇಸರಿ ಕಲ್ಮಂಜ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

error: Content is protected !!