ಆರ್ಥಿಕ ಸಂಕಷ್ಟ: ಚಿಕಿತ್ಸಾ ಸಹಾಯಾರ್ಥ ಸ್ಪಂದನಾ ಸೇವಾ ಸಂಘದಿಂದ ಸಹಾಯಹಸ್ತ

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ ನವೆಂಬರ್‌ ತಿಂಗಳ 13ನೇ ಸೇವಾ ಯೋಜನೆಯ ಧನಸಹಾಯವನ್ನು ಆರ್ಥಿಕ ಸಂಕಷ್ಟದಲ್ಲಿರುವ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಉಳತ್ತೋಡಿ ನಿವಾಸಿ ಕೇಶವ ಗೌಡ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ₹ 10 ಸಾವಿರದ ಚೆಕ್ಕನ್ನು ವಿತರಿಸಲಾಯಿತು.

ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಶ್ರೀನಾಥ ಗೌಡ ಕೆ.ಎಂ. ಬೆಳ್ತಂಗಡಿ ಅವರು ಮೂಲಕ ಫಲಾನುಭವಿ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.

ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ನಿರ್ದೇಶಕರಾದ ಧರ್ಣಪ್ಪ ಗೌಡ ಬಾನಡ್ಕ, ರಾಜೀವ ಗೌಡ ಧರ್ಮಸ್ಥಳ, ವಾಣಿ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ವಾಣಿ ಸೌಹಾರ್ದ ಕೋ-ಅಪರೆಟೀವ್ ನ ನಿರ್ದೇಶಕ ಸುರೇಶ್ ಗೌಡ ಕೌಡಂಗೆ ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!