ಅಭಿವೃದ್ಧಿಯೇ ನಮ್ಮ ಮೂಲ ಉದ್ಧೇಶ, ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಭಾರತದ  ಮಾಜಿ ಪ್ರದಾನಿ ದಿ.ವಾಜಪೇಯಿಯವರ  ಕನಸಿನ ಕೂಸಾದ “ಸ್ವರ್ಣ ಚತುಷ್ಪಥ ರಸ್ತೆ” ಆರಂಭಗೊಂಡು ಇಂದು ದೇಶದ ಉದ್ದಗಲಕ್ಕೂ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ 235.20ಕೀ.ಮಿ ಗ್ರಾಮೀಣಾ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು ಅವರು ಉಜಿರೆಯಲ್ಲಿ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಮ್ಮ ರಾಜಕಾರಣ ಅಭಿವೃದ್ಧಿಯ ರಾಜಕಾರಣ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ. ಇವತ್ತು ದೇಶದಲ್ಲಿ ಸನ್ಮಾನ್ಯ ಪ್ರದಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕೆಲಸಗಳು ಇವತ್ತುಎಲ್ಲದರ ಕ್ರೂಢೀಕರಣದ ರೀತಿಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಎರಡು ವರುಷಗಳ ಅವಧಿಯಲ್ಲಿ  500 ರಿಂದ 600 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ  ಕೊಟ್ಟಿರುವಂತಹ ಅನುದಾನದ ಮೂಲಕ ಅಭಿವೃದ್ಧಿ ಕೆಲಸಗಳನ್ನು ನಮ್ಮ ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ .ಪ್ರಾಯಶಃ ಇವತ್ತು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಭಾರತದ ಇತಿಹಾಸಗಳ ನಂತರ ಇಷ್ಟು ವರುಷಗಳಲ್ಲಿ ಪಿ ಡ್ಬ್ಲೂ ಡಿ ಇಲಾಖೆಯ ಮೂಲಕ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತಹ ಕಾರ್ಯಗಳು ಆಗಿದೆ.
ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ, ಎಸ್, ಯಡಿಯೂರಪ್ಪ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಇವರಿಗೆ ಬೆಳ್ತಂಗಡಿ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.   ಕಿಂಡಿ ಅಣೆಕಟ್ಟುಗಳ ಬಗ್ಗೆ  ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಸಚಿವರಾದ ಮಾದುಸ್ವಾಮಿಯವರಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದೇನೆ ಭರವಸೆ ನೀಡಿದ್ದಾರೆ  ಮುಂದಿನ ದಿನಗಳಲ್ಲಿ ಭರವಸೆಯನ್ನು ಪೊರೈಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು
ರೈತಾಪಿ  ವರ್ಗ ನಗರ ಪ್ರದೇಶದ ಎಲ್ಲಾ ( ಆರೋಗ್ಯ ,ಶಿಕ್ಷಣ, ಮಾರುಕಟ್ಟೆ, ಮುಂತಾದ ) ಸೌಲಭ್ಯ ಗಳನ್ನು ಸುಲಭವಾಗಿ ಪಡೆದು ನೆಮ್ಮದಿಯಿಂದ ಬಾಳಿ ಗ್ರಾಮ ಸ್ವರಾಜ್ಯ  ಕನಸು ನನಸಾಗಬೇಕೆಂಬುವುದೇ ಬಿಜೆಪಿ ಸರ್ಕಾರದ ಆಶಯ ಎಂದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಕೊರಗಪ್ಪ ನಾಯ್ಕ , ಸೌಮ್ಯ ಜಯಂತ್ ಗೌಡ, ಮಮತ ಎಂ ಶೆಟ್ಟಿ, ತಾ ಪಂ ಸ್ಥಾಯಿ ಸಮಿತಿ ಆಧ್ಯಕ್ಷ ಶಶಿಧರ್ ಕಲ್ಮಂಜ, ಪಿಡ್ಬ್ಯೂಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ ಉಪಸ್ಥಿತರಿದ್ದರು.

error: Content is protected !!