
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು 01 ರಂದು ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿ ಕಡಿರುದ್ಯಾವರ ಗ್ರಾಮದ ಕೊಂಬರೋಡಿ ನಿವಾಸಿ ನಿಖಿತ (19) ಎಂದು ಗುರುತಿಸಲಾಗಿದ್ದು.ಬೆಳ್ತಂಗಡಿಯ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದಳು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ಮಷ್ಟೆ ತಿಳಿದು ಬರಬೇಕಾಗಿದೆ.