
ಬೆಳ್ತಂಗಡಿ: ಕೆ ಎಸ್ ಆರ್ ಟಿ ಸಿ ಬಸ್ಸೊಂದು ಹೆದ್ದಾರಿ ಬದಿಯ ಪುಟ್ ಪಾತ್ ಮೇಲೆ ಹತ್ತಿದ್ದು, ಕಬ್ಬಿಣದ ಗಾರ್ಡ್ ಗಳು ಪುಡಿ ಪುಡಿಯಾದ ಘಟನೆ ಹಳೇ ಪೇಟೆ ವಾಣಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಮಧ್ಯಾಹ್ನ ನಡೆದಿದೆ. ಗುರುವಾಯನಕೆರೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಅತೀ ವೇಗವಾಗಿ ಬಂದ್ದು ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ನ ಕಬ್ಬಿಣದ ಗಾರ್ಡ್ ಸೇರಿದಂತೆ ಬೀದಿ ದೀಪಗಳ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗಾರ್ಡ್ ಗಳು ಪುಡಿ ಪುಡಿಯಾಗಿದೆ. ಒಂದು ವೇಳೆ ಶಾಲೆ ಬಿಡುವ ಸಮಯದಲ್ಲಿ ಈ ರೀತಿಯ ಘಟನೆ ಸಂಭವಿಸುತಿದ್ದರೆ ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.