ಮುಲ್ಕಿ ಒಕ್ಕೂಟದ ಸಭಾಭವನಕ್ಕೆ ₹ 1.25 ಕೋಟಿ ದೇಣಿಗೆ ನೀಡಿದ ಉದ್ಯಮಿ ಶಶಿಧರ್ ಶೆಟ್ಟಿ:

 

 

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರು ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯ ಕೊಡುಗೈ ದಾನಿ, ಶಶಿ ಕೇಟರಿoಗ್ ಸರ್ವಿಸಸ್ ನ ಸಿ ಎಂ. ಡಿ. ಬರೋಡ ಶಶಿಧರ್ ಶೆಟ್ಟಿಯವರು ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡಾ.ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಿ ಇದೇ ಡಿಸೆoಬರ್ ತಿಂಗಳಿನಲ್ಲಿ ಲೋಕಾರ್ಪಣೆ ಆಗಲೇಬೇಕೆಂಬ ಉದ್ದೇಶದಿಂದ ರೂ. 1.25 ಕೋಟಿ ದೇಣಿಗೆ ನೀಡಿದ್ದಾರೆ. ಇವರು 2018 ರಿಂದ ದೇಣಿಗೆ ನೀಡಿ ಮಹಾ ನಿರ್ದೇಶಕರಾಗಿ ಒಕ್ಕೂಟದ ಹಲವಾರು ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ.ಅರ್ಥಿಕ ಸಹಕಾರ ನೀಡಿದ ಇವರಿಗೆ ಜಾಗತಿಕ ಬಂಟರ ಒಕ್ಕೂಟ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ,ಉಪಾಧ್ಯಕ್ಷ
ಕರ್ನಿರೆ ವಿಶ್ವನಾಥ ಶೆಟ್ಟಿ
ಗೌರವ ಕಾರ್ಯದರ್ಶಿ
ಇಂದ್ರಾಳಿ ಜಯಕರ ಶೆಟ್ಟಿ
ಕೋಶಾಧಿಕಾರಿ
ಉಳ್ತೂರು ಮೋಹನದಾಸ ಶೆಟ್ಟಿ ,ಜೊತೆ ಕಾರ್ಯದರ್ಶಿ
ಚಂದ್ರಹಾಸ ಡಿ.ಶೆಟ್ಟಿ

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷ
ಗಿರೀಶ್ ಶೆಟ್ಟಿ ತೆಳ್ಳಾರ್
ಸಂಚಾಲಕ
ಕೊಲ್ಲಾಡಿ ಬಾಲಕೃಷ್ಣ ರೈ ಸೇರಿದಂತೆ
ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!