ಶ್ರೀ ಜನಾರ್ದನ ವಿಭೂಷಣ ಗೌರವಕ್ಕೆ ಭಾಜನರಾದ ಉಜಿರೆ ಮೋಹನ್ ಕುಮಾರ್:

 

 

ಬೆಳ್ತಂಗಡಿ: ಉಜಿರೆ ಜನಾರ್ದನ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿಶೇಷ ಸಹಕಾರ ನೀಡಿದ ಹಾಗೂ ವಿವಿಧ ಸಮಾಜಮುಖಿ ಸೇವೆಗಳನ್ನು ಹಲವಾರು ವರ್ಷಗಳಿಂದ ಮಾಡುತ್ತಿರುವ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ  ಮೋಹನ್ ಕುಮಾರ್ ಅವರಿಗೆ ಶ್ರೀ ಜನಾರ್ದನ ವಿಭೂಷಣ ಗೌರವವನ್ನು  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು  ಸ್ವಾಮೀಜಿಗಳ, ಗಣ್ಯರ ಉಪಸ್ಥಿತಿಯಲ್ಲಿ  ನೀಡಿ ಸನ್ಮಾನಿಸಿದರು.  ತಾಯಿ ಲೀಲಾವತಿಯವರೊಂದಿಗೆ ಈ ಗೌರವವನ್ನು    ಮೋಹನ್ ಕುಮಾರ್  ಗೌರವದಿಂದ ಸ್ವೀಕರಿಸಿದರು.

error: Content is protected !!