
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ದೃಷ್ಟಿಯಿಂದ ಸೈಂಟ್ ಮೇರಿಸ್ ಅಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕೊಡುಗೈದಾನಿ ಶಶಿಧರ್ ಶೆಟ್ಟಿಯವರ ಸಹೋದರ ಉದ್ಯಮಿ ರಾಜೇಶ್ ನವಶಕ್ತಿ ಹಾಗೂ ಸುಚಿತ ಶೆಟ್ಟಿಯವರ ಪುತ್ರಿ ಇವಾಂಕ ಶೆಟ್ಟಿ ಅವರು ಕೇಶದಾನ ಮಾಡುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡಿದ್ದಾರೆ.ಈಗಾಗಲೇ ಸಮಾಜ ಮುಖಿ ಚಿಂತನೆಗಳ ಮೂಲಕ ಅಶಕ್ತರ ಬದುಕಿಗೆ ಬೆಳಕು ತೋರುತ್ತಿರುವ ಗುರುವಾಯನಕೆರೆ ನವಶಕ್ತಿ ಕುಟುಂಬದ ಇವಾಂಕ ಶೆಟ್ಟಿ
ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತಮ್ಮ ಕೇಶದಾನ ಮಾಡಿದ್ದಾರೆ
ಈ ಮಗುವಿನ ಹೃದಯವೈಷಲ್ಯತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.