
ಬೆಳ್ತಂಗಡಿ: ಕುಕ್ಕಿನಕಟ್ಟೆ ಪಡ್ಪು ಎಂಬಲ್ಲಿ ಸುಮಾರು ವರ್ಷಗಳಿಂದ ಇರುವ ಸಾರ್ವಜನಿಕ ದೈವಸ್ಥಾನದ ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಸ್ಥಳೀಯ ವ್ಯಕ್ತಿ ರಾಮಕೃಷ್ಣ ಭಟ್ ಮಾಡುತಿದ್ದಾರೆ. ಈಗಾಗಲೇ ಅವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನಡ ಗ್ರಾಮ ಸಭೆಯಲ್ಲಿ ನಡೆಯಿತು.ಸ್ಥಳೀಯರಾದ
ರಾಮಕೃಷ್ಣ ಭಟ್ ಎಂಬವರು ಪಂಚಾಯತ್ ರಸ್ತೆ ನಿರ್ಮಾಣಕ್ಕೂ ನ್ಯಾಯಲಯದಿಂದ ತಡೆಯೊಡ್ಡುತಿದ್ದಾರೆ. ಅವರ ಜಾಗದ ವಿವರಗಳನ್ನು ತಕ್ಷಣ ಕಂದಾಯ ಇಲಾಖೆ ಪರಿಶೀಲಿಸಿ ಸರ್ವೇ ನಡೆಸಬೇಕು, ಒಂದು ವೇಳೆ ಸರ್ಕಾರಿ ಜಾಗ ಒತ್ತುವರಿ ಆಗಿದ್ದರೆ ಕಂದಾಯ ಇಲಾಖೆ ವಶಕ್ಕೆ ತಗೊಳ್ಳುವಂತೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.