ಬೆಳ್ತಂಗಡಿ: ಬಿಸಿಲಿನ ತಾಪ, ವಿಪರೀತ ಸೆಖೆಯಿಂದ ಕಂಗಲಾಗಿದ್ದ ತಾಲೂಕಿನ ಜನರಿಗೆ ಮಳೆರಾಯ ಕರುಣೆ ತೋರಿದ್ದಾನೆ. ಧರ್ಮಸ್ಥಳ .ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ. ಸಿಡಿಲು ಗಾಳಿಯ ಅಬ್ಬರದೊಂದಿಗೆ ಮಳೆ ಸುರಿಯಲು ಪ್ರಾರಂಭವಾಗಿದೆ. ಉಜಿರೆ , ಕಕ್ಕಿಂಜೆ ಸೇರಿದಂತೆ ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಸುಳ್ಯ ತಾಲೂಕು, ಕಡಬ ಗಳಲ್ಲಿಯೂ ಈಗಾಗಲೇ ಸಾಧಾರಣ ಮಳೆಯಾಗಿದ್ದು , ಕಳೆದ ಒಂದು ವಾರಗಳಿಂದ ವಿಪರೀತ ಬಿಸಿಲಿನ ಬೇಗೆ ಹೆಚ್ಚಾಗಿದೆ. ಈಗಾಗಲೇ ಜಿಲ್ಲಾಡಳಿತ ಬಿಸಿಲಿನ ಅಘಾತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ನದಿ ತೊರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಒಮ್ಮೆ ಮಳೆ ಬಂದ್ದು ಈ ಬೇಗೆಯಿಂದ ಮುಕ್ತಿ ಸಿಗಲಿ ಎಂದು ಜನರಾಡಿಕೊಳ್ಳುತಿರುವಾಗಲೇ ಇಳೆಗೆ ಮಳೆಯ ಸಿಂಚನವಾಗಿದೆ..