ಬೆಳ್ತಂಗಡಿ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೂತನ ಅಧ್ಯಕ್ಷರಾಗಿ ಅಜಿತ್.ಜಿ.ಶೆಟ್ಟಿ , ಉಪಾಧ್ಯಕ್ಷರಾಗಿ ಕೆ. ಜಯಂತ ಶೆಟ್ಟಿ ಕುಂಟಿನಿ ಆಯ್ಕೆಯಾದರು.
ಗುರುವಾಯನಕೆರೆ ಸೊಸೈಟಿಯ ಆಡಳಿತ ಕಛೇರಿಯಲ್ಲಿ ಫೆ 03 ರಂದು ಅವಿರೋಧವಾಗಿ ಆಯ್ಕೆಯಾದ ಎಲ್ಲ ನಿರ್ದೆಶಕರುಗಳ ಸಮ್ಮುಖದಲ್ಲಿ ಅಜಿತ್ ಕುಮಾರ್ ಹಾಗೂ ಜಯಂತ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸೇರಿದಂತೆ ಗಣ್ಯರು ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ಶುಭ ಹಾರೈಸಿದರು.