ಗುರುವಾಯನಕೆರೆ, ಬೈಕ್ ಡಿವೈಡರ್ ಗೆ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು:

 

 

 

 

ಬೆಳ್ತಂಗಡಿ:ಬೈಕೊಂದು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾಯನಕೆರೆ ಬಳಿ ಗುರುವಾರ ಸಂಜೆ ನಡೆದಿದೆ.

 

 

ಗುರುವಾಯನಕೆರೆ ಕಾರ್ಕಳ ರಸ್ತೆಯ   ಶಕ್ತಿನಗರದ ಬಳಿ  ಅಪಘಾತ ನಡೆದಿದ್ದು,  ಮೃತ ಯುವಕ
ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್ (31) ಎಂದು ಗುರುತಿಸಲಾಗಿದೆ.ತನ್ನ ಮನೆಯಿಂದ ಗುರುವಾಯನಕೆರೆ ಪೇಟೆಗೆ ಬರುತ್ತಿರುವ ವೇಳೆ ಶಕ್ತಿ ನಗರ ಎಂಬಲ್ಲಿ ನಾಯಿಯೊಂದು ರಸ್ತೆಯಲ್ಲಿ ಅಡ್ಡ ಬಂದಿದ್ದು , ಈ ವೇಳೆ ಅದನ್ನು ತಪ್ಪಿಸುವ ವೇಳೆ ರಸ್ತೆ ಬದಿಯ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಈ ಘಟನೆ ನಡೆದಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

error: Content is protected !!