ಬೆಳ್ತಂಗಡಿ ,ಉದ್ಯಮಿ ಜೆಸಿಐ ಪೂರ್ವಾಧ್ಯಕ್ಷ ರಂಜನ್ ರಾವ್ ನಿಧನ:

 

 

ಬೆಳ್ತಂಗಡಿ: ಉದ್ಯಮಿ ಜೆಸಿಐ ಪೂರ್ವಾಧ್ಯಕ್ಷ ಸೀನಿಯರ್ ಜೆಸಿ ppf  ಪ್ರಥ್ವಿ ರಂಜನ್ ರಾವ್ ಹೃದಯಾಘಾತದಿಂದ ಮಂಗಳವಾರ ಸಂಜೆ ನಿಧನ ಹೊಂದಿದ್ದಾರೆ.
ಇಂದು ಮಧ್ಯಾಹ್ನ  ಹೃದಯಾಘಾತಕ್ಕೊಳಗಾಗಿ  ಅಸ್ವಸ್ಥರಾದ ಅವರನ್ನು ತಕ್ಷಣ ಮನೆಯವರು  ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ಅದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವಾರೂ ವರ್ಷಗಳಿಂದ ಬೆಳ್ತಂಗಡಿಯಲ್ಲಿ ಶಾಮಿಯಾನದ ಉದ್ಯಮವನ್ನು ನಡೆಸುತಿದ್ದ ಅವರು ಸ್ನೇಹ ಜೀವಿಯಾಗಿದ್ದರು. ರಾತ್ರಿ ಮೃತ ದೇಹ ಬೆಳ್ತಂಗಡಿಗೆ ಆಗಮಿಸಲಿದ್ದು  ,.ಬುಧವಾರ ಬೆಳಿಗ್ಗೆ ಅವರ ಅಂತ್ಯಕ್ರಿಯೆ ಲಾಯಿಲ ಮುಕ್ತಿಧಾಮದಲ್ಲಿ  ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

error: Content is protected !!