ಯಾದಗಿರಿ, ದೇವಸ್ಥಾನಕ್ಕೆ ಸಿಡಿಲು ಬಡಿತ: ನಾಲ್ವರು ಸ್ಥಳದಲ್ಲೇ ಸಾವು:5 ಮಂದಿ ಗಂಭೀರ:

 

 

ಯಾದಗಿರಿ : ದೇವಸ್ಥಾನಕ್ಕೆ ಸಿಡಿಲು ಬಡಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ ಐದಕ್ಕಿಂತಲೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಜಿನಕೇರ ತಾಂಡಾ ಬಳಿ
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ , ಆಶ್ರಯ ಪಡೆಯಲು ಜಮೀನಿನ ಪಕ್ಕದಲ್ಲೆ ಇದ್ದ ಚಿಕ್ಕದಾದ ಮುರುಗಮ್ಮ ದೇವೀ ದೇವಸ್ಥಾನಕ್ಕೆ ತೆರಳಿದರು, ಇದೇ ವೇಳೆ ದೇವಸ್ಥಾನಕ್ಕೆ ಸಿಡಿಲು ಬಡಿದಿದೆ.ಸಿಡಿಲಿನ ಅಘಾತಕ್ಕೆ ನಾಲ್ವರು ಅಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನೇನು(18), ಚೇನು(22), ಕಿಶನ್(30) ಮತ್ತು ಸುಮ್ಮಿ ಬಾಯಿ(30) ಎಂದು ಗುರುತಿಸಲಾಗಿದೆ.ಗಂಭೀರ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!