ಬೆಳ್ತಂಗಡಿ, ಬಂಟರ ಯಾನೆ ನಾಡವರ ಸಂಘ: ಮಹಿಳಾ ಮತ್ತು ಯುವವಿಭಾಗದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಜಯಲಕ್ಷ್ಮಿ ಸಾಮಾನಿ, ಪ್ರತೀಕ್ ಶೆಟ್ಟಿ ನೊಚ್ಛ :

 

 

 

ಬೆಳ್ತಂಗಡಿ:ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಬಂಟರ ಯುವ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳ ಆಯ್ಕೆಯು ಗುರುವಾಯನಕೆರೆ ಬಂಟರ ಸಂಘದಲ್ಲಿ ಸ 22 ರಂದು ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಅಧ್ಯಕ್ಷತೆಯಲ್ಲಿ  ನಡೆಯಿತು.‌ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶ್ರೀಮತಿ ನವೀನ್ ಸಾಮಾನಿ ಕರಂಬಾರು ಬೀಡು, ಉಪಾಧ್ಯಕ್ಷರಾಗಿ ಶ್ರೀಮತಿ ಸಂಗೀತಾ ಶೆಟ್ಟಿ ಮಡಂತ್ಯಾರ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೇಯಾ .ಪಿ. ಶೆಟ್ಟಿ ಶಕ್ತಿನಗರ, ಕೋಶಾಧಿಕಾರಿಯಾಗಿ ಶ್ರೀಮತಿ ರಕ್ಷಿತಾ ಶೆಟ್ಟಿ ಓಡಿಲ್ನಾಳ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶುಭಾಶ್ರೀ ಉಜಿರೆ, ಆಯ್ಕೆಯಾಗಿದ್ದಾರೆ. ಯುವ ವಿಭಾಗದ ಅಧ್ಯಕ್ಷರಾಗಿ ಪ್ರತೀಕ್ .ಪಿ. ಶೆಟ್ಟಿ ನೊಚ್ಛ ಅಳದಂಗಡಿ, ಉಪಾಧ್ಯಕ್ಷರಾಗಿ ಪ್ರಜ್ವಲ್ ಶೆಟ್ಟಿ ಪಾಡ್ಯಾರ್, ಕಾರ್ಯದರ್ಶಿಯಾಗಿ ಪ್ರೇಮ್ ನಾಥ್ ಶೆಟ್ಟಿ ಗುಂಪಲಾಜೆ , ಕೋಶಾಧಿಕಾರಿಯಾಗಿ ಪ್ರಣಮ್ ರೈ ಗರ್ಡಾಡಿ, ಜೊತೆ ಕಾರ್ಯದರ್ಶಿಯಾಗಿ ವಿನೋದ್ ಆಳ್ವ ಸವಣಾಲು ಇವರನ್ನು ಆಯ್ಕೆ ಮಾಡಲಾಯಿತು. ಅದಲ್ಲದೇ   ನಿರ್ದೆಶಕರುಗಳನ್ನು  ಹಾಗೂ ವಲಯ ಸಮಿತಿಗಳನ್ನೂ ಸಭೆಯಲ್ಲಿ ರಚಿಸಲಾಯಿತು..

error: Content is protected !!