
ಬೆಳ್ತಂಗಡಿ: ಶನಿವಾರ ಸುರಿದ ಭಾರೀ ಮಳೆಯಿಂದ ಲಾಯಿಲ ಗ್ರಾಮದ ಪುತ್ರಬೈಲು ,ಗುರಿಂಗಾನ ಹೊಳೆ ಬದಿ , ಭಾಗಗಳ ಹಲವಾರು ಮನೆಗಳು ಜಲವೃತ್ತಗೊಂಡು ಆನೇಕ ಕುಟುಂಬಗಳನ್ನು ಪಂಚಾಯತ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಕೆಲವೊಂದು ಕುಟುಂಬಗಳ ಪಾತ್ರೆ ಆಹಾರ ಸಾಮಾಗ್ರಿಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿ ಆತಂತ್ರ ಸ್ಥಿತಿಯಲ್ಲಿದ್ದ , ಸುಮಾರು 15 ಕುಟುಂಬಗಳಿಗೆ ವಕೀಲರು ಮಾಜಿ ಗ್ರಾ ಪಂ ಸದಸ್ಯ ದಿನೇಶ್ ಶೆಟ್ಟಿ ನೇತೃತ್ವದಲ್ಲಿ ದಾನಿಗಳಾದ ಕಾರ್ತಿಕ್ ಆಸೋಶಿಯೇಷನ್ ಮಾಲಕ ಕಾರ್ತಿಕ್ ಅವರ ಸಹಕಾರದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.ಈ ವೇಳೆ ಹರಿಪ್ರಸಾದ್ ಲಾಯಿಲ, ಉದಯ ಕೊಯ್ಯೂರು ಉಪಸ್ಥಿತರಿದ್ದರು.