ಕಾಶಿಪಟ್ಣ : ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ..!

ಬೆಳ್ತಂಗಡಿ: ಮನೆಯ ಸಮೀಪದ ಕಾಡಿನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಶಿಪಟ್ಣ ಗ್ರಾಮದಲ್ಲಿ ಸೆ.19ರ ರಾತ್ರಿ ಸಂಭವಿಸಿದೆ.

ಕಾಶಿಪಟ್ಣ ಗ್ರಾಮದ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಅವರ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ನೊಣಯ್ಯ ಪೂಜಾರಿಯವರು ಕಳೆದ 5 ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು. ಈ ಕಾರಣಕ್ಕೆಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

ನೋಣಯ್ಯ ಪೂಜಾರಿಯವರ ಮೊದಲ ಪತ್ನಿ 10ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ಕೆಲವು ವರ್ಷಗಳ ನಂತರ ಅವರು ಬೇಬಿಯವರನ್ನು 2ನೇ ವಿವಾಹವಾಗಿದ್ದರು. ಮೊದಲನೇ ಪತ್ನಿಗೆ ಓರ್ವ ಹೆಣ್ಣು ಮಗಳು ಹಾಗೂ 5 ಗಂಡು ಮಕ್ಕಳು ಇದ್ದಾರೆ.
ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!