ಅಂಗಡಿ ಮುಂಭಾಗದಲ್ಲಿ ಕುಳಿತ ವ್ಯಕ್ತಿ ಮೇಲೆ ಹಲ್ಲೆ : ಗಾಯಾಳು ಬೆಳ್ತಂಗಡಿ ಆಸ್ಪತ್ರೆಗೆ ದಾಖಲು: ಧರ್ಮಸ್ಥಳ ಪೊಲೀಸರಿಗೆ ದೂರು

ಕೊಕ್ಕಡ: ಅಂಗಡಿ ಮುಂಭಾಗದ ಜಗಲಿಯಲ್ಲಿ  ಕುಳಿತ ವ್ಯಕ್ತಿಯ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಪಿಜಿನಡ್ಕ ನಿವಾಸಿ ಮಂಚ್ಚ ಮುಗೇರ ಎಂಬವರು ಸೆ.01ರಂದು ಹಳ್ಳಂಗೇರಿಯ ರಾಮಣ್ಣ ಗೌಡರ ಅಂಗಡಿ ಬಳಿ ಬರುತ್ತಿದ್ದಂತೆ ಮಳೆ ಸುರಿದಿದ್ದು, ಛತ್ರಿ ಇಲ್ಲದ ಕಾರಣ ಅಂಗಡಿಯ ಮುಂಭಾಗದ ಜಗಲಿಯಲ್ಲಿ ಕುಳಿತ್ತಿದ್ದು, ಈ ವೇಳೆ ಬಂದ ರಾಮಣ್ಣ ಗೌಡ ಇಲ್ಲೇಕೆ ಕುಳಿತ್ತಿದ್ದಿ ಎಂದು ಪ್ರಶ್ನಿಸಿ, “ನೀವು ನಿಮ್ಮ ಜಾತಿಯ ಬುದ್ದಿಯನ್ನು ಬಿಡುವುದಿಲ್ಲ ಎಂದು” ಜಾತಿ ನಿಂದನೆ ಮಾಡಿ ಮರದ ರೀಪಿನಲ್ಲಿ ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾರೆ.

ಘಟನೆಯ ಬಳಿಕ ಅದೇ ರಸ್ತೆಯಲ್ಲಿ ಕೆಲಸ ಬಿಟ್ಟು ಬರುತ್ತಿದ್ದ ಮಂಚ್ಚ ಮುಗೇರ ಅವರ ಸೊಸೆ (ಮಗನ ಪತ್ನಿ) ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತೆಗೆ ದಾಖಲಿಸಿದ್ದಾರೆ.

ಜಾತಿ ನಿಂದಿಸಿ ಹಲ್ಲೆ ನಡೆಸಿದ ರಾಮಣ್ಣಗೌಡರ ವಿರುದ್ಧ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

error: Content is protected !!