ದರ್ಶನ್ ಬಳ್ಳಾರಿ ಜೈಲಿಗೆ: ಇತರ ಖೈದಿಗಳಿಗೆ ಸಂಕಷ್ಟ..!: ಜೈಲ್ ಕ್ಯಾಂಟೀನ್ ಕ್ಲೋಸ್: ಸೆರೆಯಾಳುಗಳಿಗೆ ಜೈಲೂಟವೇ ಗತಿ: ಹೈ ಸೆಕ್ಯುರಿಟಿ ಸೆಲ್‌ನಲ್ಲಿ ದರ್ಶನ್ ಏಕಾಂಗಿ

ಬಳ್ಳಾರಿ: ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬಳ್ಳಾರಿ ಜೈಲಿಗೆ ಸೇರಿದ ನಟ ದರ್ಶನ್ ಅವರನ್ನು ನೋಡಲು ಅಲ್ಲಿನ ಖೈದಿಗಳು  ಖಾತರದಿಂದ ಕಾದಿದ್ರು. ಆದರೆ ದರ್ಶನ್ ಬಳ್ಳಾರಿ ಜೈಲು ಸೇರುತ್ತಿದ್ದಂತೆ ಇತರ ಖೈದಿಗಳಿಗೆ ಸಂಕಷ್ಟ ಎದುರಾಗಿದೆ.

ಜೈಲ್ ಒಳಭಾಗದಲ್ಲಿದ್ದ ಕ್ಯಾಂಟೀನ್ ನಲ್ಲಿ ಒಪ್ಪಿಗೆ ಇರುವ ಕೆಲ ವಸ್ತುಗಳನ್ನು ಇಡಲಾಗುತ್ತಿತ್ತು. ಇದನ್ನು ಖೈದಿಗಳು ಖರೀದಿ ಮಾಡುತ್ತಿದ್ದರು. ಆದರೆ ದರ್ಶನ್ ಈ ಜೈಲು ಸೇರುತ್ತಿದ್ದಂತೆ ಕ್ಯಾಂಟಿನ್ ಬಂದ್ ಮಾಡಲಾಗಿದೆ. ಈ ಜೈಲಿನಲ್ಲಿ ಏನು ಕೊಡುತ್ತಾರೋ ಅದನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ ಇತರ ಖೈದಿಗಳಿಗೆ ಬಂದೊದಗಿದೆ.

ದರ್ಶನ್ ಅವರು ಬೆಂಗಳೂರಿನ ಜೈಲಿನಲ್ಲಿ ಇದ್ದಾಗ ಅವರಿಗೆ ಸಾಕಷ್ಟು ಸೌಕರ್ಯ ಮಾಡಿಕೊಡಲಾಗಿತ್ತು. ಹೀಗಾಗಿ, ಈಗ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು ಇಲ್ಲಿ ಆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಎಚ್ಚರಿಕೆ ವಹಿಸಲಾಗುತ್ತಿದೆ.

ದರ್ಶನ್ ಇರುವ ಹೈ ಸೆಕ್ಯುರಿಟಿ ಜೈಲ್ ವಿಭಾಗದಿಂದ 5 ಕೈದಿಗಳನ್ನು ಬೇರೆ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಈಗ ದರ್ಶನ ಸೇರಿ ಕೇವಲ ಮೂವರು ಖೈದಿಗಳು ಮಾತ್ರ ಇದ್ದಾರೆ. ಸೊಳ್ಳೆ ಕಾಟಕ್ಕೆ ಒದ್ದಾಡಿದ್ದ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿದೆ. ರಾತ್ರಿ ಹೈ ಸೆಕ್ಯುರಿಟಿ ಜೈಲು ವಿಭಾಗದ ಪ್ಯಾಸೇಜ್‌ನಲ್ಲಿ ವಾಕ್ ಮಾಡಿದ್ದಾರೆ. ಸದ್ಯ ಅವರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!