ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ: ಅಲೆಯ ರಭಸಕ್ಕೆ ಕೊಚ್ಚಿ ಹೋದ ಓರ್ವ ಮೀನುಗಾರ..!

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಕುಮಟಾದ ಅಘನಾಶಿನಿ ನದಿಯ ಬೇಲೆಕಾನ್ ಬಳಿ ನಡೆದಿದೆ.

ಮುಂಜಾನೆ ಮೂರು ಮಂದಿ ಸೇರಿ ಮೀನುಗಾರಿಕೆಗೆ ತೆರಳಿದ್ದು ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ದೋಣಿ ಪಲ್ಟಿಯಾಗಿತ್ತು. ಈ ವೇಳೆ, ಇಬ್ಬರು ಮೀನುಗಾರರು ಈಜಿಕೊಂಡು ದಡ ಸೇರಿದ್ದು, ಕುಮಟಾ ತಾಲೂಕಿನ ವಿನೋದ್ ಅಂಬಿಗ (37) ಮಾತ್ರ ಅಲೆಗಳ ರಭಸಕ್ಕೆ ದಡಕ್ಕೆ ಬರಲಾಗದೆ ಕೊಚ್ಚಿ ಹೋಗಿದ್ದಾನೆ. ಈ ದೃಶ್ಯವನ್ನು ದಡದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!