ಬೆಳ್ತಂಗಡಿ, ಶಾಲೆಗಳಿಗೆ ರಜೆ ಘೋಷಿಸಿದ ತಹಶೀಲ್ದಾರ್: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಪಜಿರಡ್ಕದಲ್ಲಿ ಗಂಗಾಪೂಜೆ:

 

 

 

 

 

ಬೆಳ್ತಂಗಡಿ: ತಾಲೂಕಿನಲ್ಲಿ ನಿನ್ನೆಯಿಂದ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತಿದ್ದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ.ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಿಗೂ ತಹಶೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ. ಭಾರೀ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿಯುತಿದ್ದು ನೀರು ಪಜಿರಡ್ಕ ದೇವಸ್ಥಾನದ ಅವರಣಕ್ಕೆ ನುಗ್ಗುತ್ತಿದೆ,ಯಾವುದೇ  ರೀತಿಯ ಪೃಕೃತಿ ವಿಕೋಪ ನೀರಿನಿಂದ  ಅಪಾಯ ಎಲ್ಲಿಯೂ  ಸಂಭವಿಸದಿರಲಿ ಎಂದು  ದೇವಸ್ಥಾನದಲ್ಲಿ   ಗಂಗಾ ಪೂಜೆ ನೆರವೇರಿಸಲಾಗಿದೆ.

error: Content is protected !!