ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗಾಗಿ ಅವರ ತಾಯಿ ತಂದಿದ್ದ ಬಾಕ್ಸ್ ನ್ನು ಜೈಲು ಸಿಬ್ಬಂದಿ ವಾಪಸ್ಸು ಕಳುಹಿಸಿದ್ದಾರೆ.

ಪವಿತ್ರಾ ಗೌಡ ಇರೋ ಕೋಣೆಯಲ್ಲಿ 10ಕ್ಕೂ ಹೆಚ್ಚು ಕೈದಿಗಳು ಇದ್ದು, ಮನೆಯಿಂದ ತಂದ ತಿಂಡಿಯನ್ನು ಇಟ್ಟುಕೊಳ್ಳಲು ಬಾಕ್ಸ್ ಬೇಕು ಎಂದು ಪವಿತ್ರ ಗೌಡ ತಾಯಿಗೆ ಹೇಳಿದ್ದರಂತೆ. ಹೀಗಾಗಿ ಅವರು ಇಂದು ಜೈಲಿಗೆ ಬಾಕ್ಸ್ ಸಮೇತ ಬಂದಿದ್ದರು. ಆದರೆ ಬಾಕ್ಸ್ ಅನ್ನು ಒಳಗೆ ಕಳುಹಿಸಲು ಜೈಲು ಸಿಬ್ಬಂದಿ ಒಪ್ಪಿಲ್ಲ. ಜೈಲು ನಿಯಮದ ಪ್ರಕಾರ ಹೊರಗಿನ ಪಾತ್ರೆಗಳಿಗೆ ಅವಕಾಶವಿಲ್ಲ. ಇದನ್ನು ಪವಿತ್ರಾ ತಾಯಿಗೆ ತಿಳಿಹೇಳಿ ವಾಪಸ್ಸು ಕಳುಹಿಸಿದ್ದಾರೆ.

error: Content is protected !!