‘ದರ್ಶನ್ ಸರ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ: ಜೈಲಿನಿಂದ ಹೊರ ಬಂದ ಮೇಲೆ ಹೊಸ ವ್ಯಕ್ತಿಯಾಗಿ ಬರಲಿ’: ದರ್ಶನ್ ಕೊಲೆ ಪ್ರಕರಣದ ಕುರಿತು ರಾಜ್ ಬಿ ಶೆಟ್ಟಿ ರಿಯಾಕ್ಟ್

ನಟ ದರ್ಶನ್ ಪ್ರಕರಣದ ಕುರಿತು ಒಂದಷ್ಟು ನಟ, ನಟಿಯರು ಅಭಿಪ್ರಾಯ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರೆ. ಇನ್ನೊಂದಷ್ಟು ಸಿನಿಮಾ ನಟ, ನಟಿಯರು ಯಾವುದೇ ಮುಚ್ಚುಮರೆಯಿಲ್ಲದೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದೀಗ ‘ಟೋಬಿ’ ಚಿತ್ರ ನಟ ರಾಜ್ ಬಿ ಶೆಟ್ಟಿ ಅವರು ದರ್ಶನ್ ಅವರ ಬಗ್ಗೆ ನೇರವಾಗಿ ರಿಯಾಕ್ಟ್ ಮಾಡಿದ್ದಾರೆ.

‘ದರ್ಶನ್ ಸರ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ಜೈಲಿನಿಂದ ಹೊರ ಬಂದ ಮೇಲೆ ದರ್ಶನ್ ಅವರು ಹೊಸ ವ್ಯಕ್ತಿಯಾಗಿ ಬರಲಿ’ ಎಂದಿರುವ ಅವರು ಈ ಘಟನೆ ನಿಜಕ್ಕೂ ಚಿತ್ರರಂಗಕ್ಕೆ ಎಫೆಕ್ಟ್ ಆಗಿದೆ. ಇದರಿಂದ ನಮ್ಮ ಇಮೇಜ್ ಕೂಡ ಚೇಂಜ್ ಆಗುತ್ತದೆ. ಚಿತ್ರರಂಗದಲ್ಲಿ ಎಲ್ಲರೂ ಸಂಬಂಧಿಕರೇ ಒಳ್ಳೆಯದು ಮಾಡಲಿ ಕೆಟ್ಟದು ಮಾಡಲಿ. ನಮ್ಮವರು ‘ಕೆಜಿಎಫ್’ ನಂತಹ ಸಿನಿಮಾ ಮಾಡಿದಾಗ ನಮಗೆ ಹೇಗೆ ಹೆಮ್ಮೆ ಅನಿಸುತ್ತದೆಯೋ ಹಾಗೆಯೇ ಒಬ್ಬರ ಮೇಲೆ ಈ ರೀತಿ ಆರೋಪ ಬಂದಾಗ ನಾವು ಕಷ್ಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ದರ್ಶನ್ ಅವರಿಂದ ಅಪರಾಧ ಆಗಿದ್ರೆ ಶಿಕ್ಷೆಯಾಗಬೇಕು. ಇಲ್ಲ ಅಂದರೆ ರಿಲೀಸ್ ಆಗ್ತಾರೆ ಅಂತ ನಂಬಿದ್ದೀನಿ. ಕಾನೂನು ಎಲ್ಲರಿಗೂ ಒಂದೇ, ಇದರಲ್ಲಿ ತಾರತಮ್ಯ ಇಲ್ಲ. ದರ್ಶನ್ ಸರ್ ಈ ಕೊಲೆ ಮಾಡಿದ್ದಾರೋ ಇಲ್ಲವೋ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ. ಒಬ್ಬ ವ್ಯಕ್ತಿ ಒಂಟಿಯಾಗಿ ನಿಂತಾಗ ಅವರು ತಪ್ಪು ಮಾಡಿಲ್ಲ ಅಂದರೂ ಪಶ್ಚಾತಾಪ ಅನುಭವಿಸ್ತಿರುತ್ತಾರೆ. ಅವರಿಗೂ ಹಾಗೇ ಆಗಿರುತ್ತದೆ ಎಂದಿದ್ದಾರೆ.

ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ನೋವಾಗುತ್ತದೆ. ದರ್ಶನ್ ಸರ್ ಲೀಡರ್ ಆಗಿದವರು. ಅವರಿಗೂ ಈ ವಿಚಾರ ದುಃಖ ಆಗಿರುತ್ತದೆ ಎಂದು ಹೇಳಿದ್ದಾರೆ.

error: Content is protected !!