ಕೊಯ್ಯೂರು ಗ್ರಾಮ ಪಟ್ಟಣ ಪಂಚಾಯತ್‍ಗೆ ಸೇರ್ಪಡೆ: ಆದೇಶ ಹಿಂಪಡೆಯವಂತೆ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಮನವಿ

ಬೆಳ್ತಂಗಡಿ : ಕೊಯ್ಯೂರು ಗ್ರಾಮವನ್ನು ಪಟ್ಟಣ ಪಂಚಾಯತ್ ಗೆ ಸೇರ್ಪಡೆಗೊಳಿಸಿರುವ ಆದೇಶವನ್ನು ಹಿಂಪಡೆಯವಂತೆ ರಾಜ್ಯ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಕೊಯ್ಯೂರು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಆದೇಶ ಹಿಂಪಡೆಯುವ ಮನವಿಯ ಜೊತೆಗೆ ಕೊಯ್ಯುರು ಉಣ್ಣಾಲು ಮಸೀದಿಯ ಮದರಸ ಕಟ್ಟಡಕ್ಕೆ ಅನುದಾನವನ್ನು ಮತ್ತು ಉಣ್ಣಾಲು ಬರೆಯದಡ್ಡ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಅನುದಾನವನ್ನು ನೀಡುವಂತೆಯೂ ಸರ್ಕಾರಕ್ಕೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೋಕೇಶ್ ಗೌಡ ಪಾಂಬೇಲು ,ಲತೀಫ್ ಉಣ್ಣಾಲು, ಸಲೀಂ ಪಾತ್ರಳ,ಸಿದ್ದೀಕ್ ಎಂ.ಎಸ್. ಮಲೆಬೆಟ್ಟು ಜೊತೆಗಿದ್ದರು.

error: Content is protected !!