ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಸಾವು: ಹೊಂಡದ ಪಕ್ಕದಲ್ಲಿ ಮೃತ ದೇಹ ಪತ್ತೆ..!

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ದುಂಗಾವತಿ ತಾಂಡಾದಲ್ಲಿ ಬೆಳಕಿಗೆ ಬಂದಿದೆ.
ರವಿ ಹಾಗೂ ಲಕ್ಷ್ಮೀ ದಂಪತಿಯ ಒಬ್ಬಳೇ ಮಗಳು ಅನಸೂಯಾ (10) ಬಹಿರ್ದೆಸೆಗೆ ತೆರಳಿದ್ದು ಬಳಿಕ ಮೃತಳಾಗಿ ಪತ್ತೆಯಾಗಿದ್ದಾಳೆ.

ಹೊಂಡದ ಪಕ್ಕದಲ್ಲಿ ಮೃತ ದೇಹ, ಮತ್ತೊಂದು ಕಡೆ ನೀರಿನ ತಂಬಿಗೆ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗಳ ಕೊಲೆಯಾಗಿದೆ, ನಮಗೆ ನ್ಯಾಯಾ ಸಿಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಹಾಗೂ ಶಾಸಕ ಕೃಷ್ಣಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!