ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಯ ತಂದೆ ಹೃದಯಾಘಾತದಿಂದ ಸಾವು..!

ಮೃತ ಚಂದ್ರಪ್ಪ 

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಯೊಬ್ಬರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅನುಕುಮಾರ್ ಎಂಬಾತ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದ್ದು, ಆತ ಪೊಲೀಸರಿಗೆ ಶರಣಾಗಿದ್ದಾನೆ. ಈ ವಿಷಯ ತಿಳಿದ ಅನುಕುಮಾರ್ ತಂದೆ ಚಂದ್ರಪ್ಪ (60) ಚಿತ್ರದುರ್ಗದ ಸಿಹಿ ನೀರಿನ ಹೊಂಡದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಕಡಿಮೆ ರಕ್ತದೊತ್ತಡದಿಂದ ಉಸಿರು ಚೆಲ್ಲಿದ್ದಾರೆ.

ಆರೋಪಿ  ಅನುಕುಮಾರ್,

ಪ್ರಕರಣದ ಆರೋಪಿಯಾಗಿರುವ ಅನುಕುಮಾರ್, ತನ್ನ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ. ಜೀವನೋಪಾಯಕ್ಕೆ ಆಟೋ ಚಾಲಕನಾಗಿದ್ದ. ಪುತ್ರನ ಬಂಧನ, ಪತಿ ಚಂದ್ರಪ್ಪ ಸಾವು ಹಿನ್ನಲೆ ಅನುಕುಮಾರ್ ತಾಯಿ ಕಂಗಾಲಾಗಿದ್ದಾರೆ.

error: Content is protected !!