ಕಲ್ಲಡ್ಕ: ಮಹಾದೇವ ಮಿತ್ರ ಮಂಡಳಿ ಕಂಚಿಲ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕಲ್ಲಡ್ಕ: ಮಹಾದೇವ ಮಿತ್ರ ಮಂಡಳಿ ಕಂಚಿಲ ಇದರ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕಂಚಿಲದಲ್ಲಿ ನಡೆಯಿತು.

ಕಂಚಿಲ, ಚೌಕದ ಪಾಲು, ನೂಜಿಪಾಡಿ ಹಾಗೂ ಬೀಡಿನಪಾಲು ಪರಿಸರದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ವಿಜಯ ಸುಳ್ಯ, ಅಧ್ಯಕ್ಷ ಉದಯ ಕಂಚಿಲ, ಗೌರವ ಸಲಹೆಗಾರಾದ ಕೃಷ್ಣಪ್ಪ ಬಂಗೇರ, ಜಿನ್ನಪ್ಪ ನಾಯ್ಕ್, ಮಹಾಬಲ ಪಾದ್ರಿಮೂಲೆ, ಕಂಚಿಲ ಮಹಾದೇವ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತಿತ್ತರರು ಉಪಸ್ಥಿತರಿದ್ದರು.

error: Content is protected !!