ಸವಣಾಲು: ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಆತ್ಮಹತ್ಯೆಗೆ ಶರಣು


ಬೆಳ್ತಂಗಡಿ : ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.4ರಂದು ನಡೆದಿದೆ.

ಶಿರ್ಸಿ ಮೂಲದ ವಿಜಯ್ ಭಟ್(29) ದೇವಸ್ಥಾನದ ಹಿಂಭಾಗದ ರೂಂನಲ್ಲಿ ಒಬ್ಬರೆ ವಾಸವಾಗಿದ್ದು ಇಂದು ಪೂಜೆಗೆ ಬಂದಿಲ್ಲ ಎಂದು ಕರೆಯಲು ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಕೋಣೆಯ ಪಕ್ಕಸಿನ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಇವರಿಗೆ ಮೂರು ತಿಂಗಳ ಮಗು ಇದೆ. ಸದ್ಯ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

error: Content is protected !!