ವೇಣೂರು ಬಳಿ ಸುಡು ಮದ್ದು ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ: ಮೂವರು ಸಾವು ಹಲವರಿಗೆ ಗಂಭೀರ ಗಾಯ: ಸ್ಫೋಟದ ಶಬ್ದಕ್ಕೆ ಬೆಚ್ಚಿದ ಸ್ಥಳೀಯ ಜನತೆ :

 

 

ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡು ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮ ಪಂಚಾಯತ್ ನ ಗೊಳಿಯಂಗಡಿ ಸಮೀಪ ನಡೆದಿದೆ.ಕುಕ್ಕೇಡಿ ಗ್ರಾಮ ಪಂಚಾಯತ್ ನ ಗೊಳಿಯಂಗಡಿ ಸಮೀಪದ ಕಲ್ಲಾಜೆ ಎಂಬಲ್ಲಿ ಬಶೀರ್ ಎಂಬವರ ಸುಡುಮದ್ದು ತಯಾರಿಕ ಘಟಕವೊಂದು ಕಾರ್ಯಚರಿಸುತಿದ್ದು ಜ28 ರಂದು ಸಂಜೆ ಅಕಸ್ಮಿಕವಾಗಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿರುವ ವೇಳೆ ಬೆಂಕಿ ಕಿಡಿ ತಗುಲಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟಿದೆ. ಅದಲ್ಲದೇ ಸ್ಫೋಟದ ಶಬ್ದ ನಾಲ್ಕು ಕಿಮೀ ಗಿಂತಲೂ ದೂರದವರೆಗೆ ಕೇಳಿದ್ದು ಸ್ಥಳೀಯರು ಭಯಗೊಂಡು ಬೆಚ್ಚಿಬಿದಿದ್ದಾರೆ.ಒಟ್ಟು ಒಂಬತ್ತು ಮಂದಿ ಕಾರ್ಮಿಕರು ಕೆಲಸ ಮಾಡುತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಬಂದು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

error: Content is protected !!