ಬೈಹುಲ್ಲಿನಲ್ಲಿ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವು..! ಸುರಕ್ಷಿತವಾಗಿ ಸೆರೆ ಹಿಡಿದ ಕಾಲೇಜು ವಿದ್ಯಾರ್ಥಿ ಪ್ರೇಮ್ ಸಾಗರ್

 

 

 

ಬೆಳ್ತಂಗಡಿ: ಬೈಹುಲ್ಲಿನಲ್ಲಿ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕಾಲೇಜ್ ವಿದ್ಯಾರ್ಥಿಯೋರ್ವ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಲಾಯಿಲ ಗ್ರಾಮದ  ಗಾಣದಕೊಟ್ಯ ಶೋಭಾ ಎಂಬವರ ಮನೆಯ ಬೈಹುಲ್ಲಿನಲ್ಲಿ ಸಂಜೆ 7.30 ರ ಸುಮಾರಿಗೆ ಹೆಬ್ಬಾವೊಂದು ಅವಿತ್ತಿದ್ದು, ಈ ಹಾವನ್ನು
ಲಾಯಿಲ ಗ್ರಾಮದ ಪಡ್ಲಾಡಿ ನಿವಾಸಿ ಗುರುದೇವ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಸಾಗರ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಉರಗ ಪ್ರೇಮಿ ಸ್ನೇಕ್ ಅಶೋಕ್ ಅವರಿಂದ ಹಾವು ಹಿಡಿಯುವ ಮಾಹಿತಿಗಳನ್ನು ಪಡೆದುಕೊಂಡು, ಈಗಾಗಲೇ ಹಲವಾರು ಹಾವುಗಳನ್ನು ಹಿಡಿದಿದ್ದಾರೆ. ಹಾವನ್ನು ರಕ್ಷಿಸುವಲ್ಲಿ ಪರಿಣಿತರಾಗಿದ್ದಾರೆ.

 

error: Content is protected !!