ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ..!: ಉಜಿರೆಯ ಮಹಾವೀರ ಡ್ರೆಸಸ್ಸ್ ಮಾಲಕ ಪ್ರಭಾಕರ್ ಹೆಗ್ಡೆ ವಿರುದ್ಧ ದೂರು.!

ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ಅಂಗಡಿ ಮಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಮೇ.14ರಂದು ನಡೆದಿದೆ.

ಕೆಲಸ ಹುಡುಕಿ ಬಂದ ಚಿಕ್ಕಮಗಳೂರಿನ ದಂಪತಿಗಳಿಗೆ ಉಜಿರೆಯ ಮಹಾವೀರ ಡ್ರೆಸಸ್ಸ್ ಮಾಲಕ ಪ್ರಭಾಕರ ಹೆಗ್ಡೆ ಕೆಲಸ ನೀಡುವುದಾಗಿ ತಿಳಿಸಿ, ಗಂಡನಿಗೆ ಅಡುಗೆ ಕೆಲಸ ಹಾಗೂ ಮಹಿಳೆಗೆ ಧರ್ಮಸ್ಥಳದಲ್ಲಿ ತನ್ನದೇ ಸೂಪರ್ ಮಾರ್ಕೆಟ್‌ನಲ್ಲಿ ಬಿಲ್ಲಿಂಗ್ ಕೆಲಸ ನೀಡುವುದಾಗಿ ಹೇಳಿದ್ದಾನೆ. ಮೇ.14ರಂದು ಭಾನುವಾರ ಕೆಲಸಕ್ಕೆ ಸೇರಲು ತಿಳಿಸಿದ್ದು, ಅದರಂತೆ ಬೆಳಿಗ್ಗೆ ಕೆಲಸಕ್ಕೆಂದು ಬಂದ ಅವರಲ್ಲಿ ಗಂಡನಿಗೆ ಅಡುಗೆ ಕೆಲಸ ಮಾಡುವಂತೆ ಹೇಳಿ, ಮಹಿಳೆಯನ್ನು ಧರ್ಮಸ್ಥಳಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕೆಲಸದ ಮಾಹಿತಿ ನೀಡುವುದಾಗಿ ನಂಬಿಸಿ, ಧರ್ಮಸ್ಥಳ ರಸ್ತೆಯಲ್ಲಿ ಹೋಗದೇ ಚಾರ್ಮಾಡಿ ಕಡೆ ಕರೆದುಕೊಂಡು ಹೋಗಿದ್ದಾನೆ. ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದ ಮಹಿಳೆಯನ್ನು ಮುಂದಿನ ಸೀಟ್‌ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ. ಕಾರು ಚಲಿಸುತ್ತಿದ್ದಂತೆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಮಹಿಳೆ ಜೋರಾಗಿ ಕಿರುಚಿದ್ದು, ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ಬೈಕ್ ಸವಾರನೊಬ್ಬ ಮಹಿಳೆಯನ್ನು ವಿಚಾರಿಸಿ ತನ್ನ ಬೈಕ್ ನಲ್ಲಿ ಉಜಿರೆ ತನಕ ವಾಪಾಸ್ ಕಳಿಸಿದ್ದಾರೆ.

ಘಟನೆಯ ಬಗ್ಗೆ ತನ್ನ ಗಂಡನಿಗೆ ಪೋನ್ ಮಾಡಿ ತಿಳಿಸಿದ ಮಹಿಳೆ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!