ಬೆಳ್ತಂಗಡಿ ಕಾಂಗ್ರೆಸ್ ಭುಗಿಲೆದ್ದ ಅಸಾಮಾಧಾನ : ರಕ್ಷಿತ್ ಶಿವರಾಂ ಆಪ್ತ ಅಜಯ್ ಮಟ್ಲ ಬಿಜೆಪಿ ಸೇರ್ಪಡೆ: ಕೆಲವೇ ದಿನಗಳಲ್ಲಿ ಮತ್ತಷ್ಟೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ..!

 

 

 

ಬೆಳ್ತಂಗಡಿ:ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ಅವರ ಹೆಸರನ್ನು ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಬಿಡುಗಡೆಗೊಳಿಸಿದೆ. ಈ ಬೆನ್ನಲ್ಲೆ ಕಾಂಗ್ರೆಸ್ಸಿನಲ್ಲಿ ಅಸಾಮಾಧಾನ ಹೆಚ್ಚಾಗುತ್ತಿದೆ.

 

 

 

ಕಾಂಗ್ರೆಸ್ ಪಕ್ಷದ  ಕಾರ್ಯಕರ್ತ, ರಕ್ಷಿತ್ ಶಿವರಾಂ ಆಪ್ತನಾಗಿ ಗುರುತಿಸಿಕೊಂಡಿದ್ದ ಅಜಯ್ ಜಾಕೋಬ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಇವರ ಸೇರ್ಪಡೆ ಬೆನ್ನಲ್ಲೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಗೊಂದಲ ಉಂಟಾಗುವ ಲಕ್ಷಣ ಕಂಡು ಬರುತ್ತಿದೆ.

 

 

ಕ್ರಿಶ್ಚಿಯನ್ ಸಮುದಾಯದ  ನಾಯಕನಾಗಿ ತುಂಬ ಕ್ರಿಯಾಶೀಲರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಜಯ್ ಜಾಕೋಬ್ ಈಗ ಬಿಜೆಪಿ ಸೆರ್ಪಡೆಗೊಂಡಿರುವುದು ಹಾಗೂ ಇನ್ನಷ್ಟೂ ಕಾರ್ಯಕರ್ತರು ಬಿಜೆಪಿಗೆ ಸೇರಲು ಒಲವು ತೋರುತ್ತಿರುವುದು ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಗೆ ದೊಡ್ಡ ಅಘಾತ ನೀಡಲಿದೆ.

error: Content is protected !!