ಜಾನಪದ ಕಲಾವಿದ ಹೆಚ್ ಕೃಷ್ಣಯ್ಯ ಲಾಯಿಲ ನಿಧನ:

 

 

 

ಬೆಳ್ತಂಗಡಿ:ಜಾನಪದ ಕಲಾವಿದ ಬಹುಮುಖ ಪ್ರತಿಭೆ ಲಾಯಿಲ ಗ್ರಾಮದ ಹೆಚ್ ಕೃಷ್ಣಯ್ಯ ಅವರು ಫೆ 20 ರಂದು ಸಂಜೆ ತನ್ನ ಮನೆಯಲ್ಲಿ‌ ನಿಧನಹೊಂದಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಲಾಯಿಲ ಗ್ರಾಮದ ಉತ್ಸಾಹಿ ಯುವಕ ಮಂಡಲವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಇವರು ಆಕಾಶವಾಣಿ , ದೂರದರ್ಶನದಲ್ಲೂ ಹಲವಾರೂ ಕಾರ್ಯಕ್ರಮ ನೀಡುತಿದ್ದರು. ಜನಪದ ಎಲ್ಲಾ ಕಲಾ ಪ್ರಕಾರಗಳು , ಲಾವಣಿ, ರಂಗಗೀತೆ , ಭಾವಗೀತೆ , ಭಕ್ತಿಗೀತೆ , ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಶಾಲಾ ದಿನಗಳಲ್ಲಿ ರೆಡಿಯೋ ಮೂಲಕ ಹಾಡುಗಳನ್ನು ಕಲಿತ ಇವರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಇವರಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಇವರ ನಿಧನಕ್ಕೆ ಹಲವಾರೂ ಮಂದಿ ಸಂತಾಪ ಸೂಚಿಸಿದ್ದು ಇಂದು ಮನೆಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

 

error: Content is protected !!