ಮೃತ ಸಂಬಂಧಿ ವಿದ್ಯಾರ್ಥಿಯನ್ನು ನೋಡಲು ಬೆಳ್ತಂಗಡಿಗೆ ತೆರಳುತಿದ್ದಾಗ ಅಪಘಾತ: ತುಂಬೆ ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಸಾವು: ಟಿಪ್ಪರ್ ಓಟಕ್ಕೆ ಮತ್ತೊಂದು ಬಲಿ, ಕುಪ್ಪೆಟ್ಟಿಯಲ್ಲಿ ‘ಹಿಟ್ ಆಂಡ್ ರನ್’ ಘಟನೆ:

 

ಬೆಳ್ತಂಗಡಿ:ಪುಂಜಾಲಕಟ್ಟೆಯಲ್ಲಿ   ಇಂದು ಬೆಳಗ್ಗೆ  ಬೈಕ್ – ಬೈಕ್ ನಡುವೆ ಅಪಘಾತ ಸಂಭವಿಸಿ ಮಂಗಳೂರಿನ ಕಾಲೇಜಿಗೆ ತೆರಳುತಿದ್ದ ವಿದ್ಯಾರ್ಥಿ ಕರಾಯದ ಮಹಮ್ಮದ್ ಶಫೀಕ್(20) ಸಾವನ್ನಪ್ಪಿದ್ದು ಈ ವಿಚಾರ ತಿಳಿದು ಸಂಬಂಧಿ ಕಕ್ಕೆಪದವು ನಿವಾಸಿ ತುಂಬೆಯ ಐಟಿಐ ವಿದ್ಯಾರ್ಥಿ ಮಹಮ್ಮದ್ ಸಫಾನ್(20) ಬೈಕ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ನಲ್ಲಿ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ ಈ ವೇಳೆ ಬೈಕ್ ನಲ್ಲಿದ್ದ ಸವಾರ ಮಹಮ್ಮದ್ ಸಫಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು , ಟಿಪ್ಪರ್ ವಾಹನ ಸಹಿತ ಚಾಲಕ ಪರಾರಿಯಾಗಿದ್ದಾ‌ನೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಬಂದ್ದು  ಪರಿಶೀಲನೆ ನಡೆಸಿದ್ದು ,ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!